Thursday, May 2, 2013

ಬಿ.ಜೆ.ಪಿ. ಬೃಹತ್ ರೋಡ್ ಶೋ



 :
ಭಾರತೀಯ ಜನತಾ ಪಕ್ಷದ ಬೃಹತ್ ರೋಡ್ ಶೋ ಕಾರ್ಯಕ್ರಮವು ದಿ. ೦೩-೦೫-೨೦೧೩, ಶುಕ್ರವಾರದಂದು ಶ್ರೀ ಗವಿಮಠದಿಂದ ಸಾರ್ವಜನಿಕ ಮೈದಾನದವರೆಗೆ ಸಮಯ ಮಧ್ಯಾಹ್ನ ೧೨ ಗಂಟೆಯಿಂದ ೪ ಗಂಟೆಯವರೆಗೆ ನಡೆಯಲಾಗುವುದು. ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣನವರ ಮತ ಯಾಚನೆಯ ಈ ರೋಡ್ ಶೋ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾ, ತಾಲೂಕು, ಹೋಬಳಿ, ಮಹಿಳಾ ಘಟಕದ ಎಲ್ಲ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಬಿ.ಜೆ.ಪಿ. ಪ್ರಚಾರ ಸಮಿತಿ ವಕ್ತಾರ ಹಾಲೇ ಕಂದಾರಿ ತಿಳಿಸಿದ್ದಾರೆ.

ಭಾಗ್ಯನಗರ ಗ್ರಾಮದಲ್ಲಿ ಕರಡಿ ಸಂಗಣ್ಣ ರೋಡ್ ಶೋ





ಭಾಗ್ಯನಗರ ಗ್ರಾಮದಲ್ಲಿ ಕರಡಿ ಸಂಗಣ್ಣನವರ ನೇತೃತ್ವದಲ್ಲಿ ಬಿ.ಜೆ.ಪಿ.ಯ ಧುರೀಣರ ಹಾಗೂ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಪರವಾಗಿ ಮತ ಯಾಚನೆ ಮಾಡುತ್ತ ಬೃಹತ್ ಸಂಖ್ಯೆಯಲ್ಲಿ ರೋಡ್ ಶೋ ನಡೆಸಿದರು.

ಮನೆಯಂಗಳಕ್ಕೆ ಉನ್ನತ ಶಿಕ್ಷಣ : ಕರಡಿ ಸಂಗಣ್ಣ


ಕೋಳೂರು, ಕೊಪ್ಪಳ, ೦೨ : ಭಾರತೀಯ ಜನತಾ ಪಕ್ಷವು ಸಂಪೂರ್ಣವಾಗಿ ಜನರ ಹಿತ ಕಾಯುವ ಪಕ್ಷವಾಗಿದ್ದು, ಜನಪರ ಆಡಳಿತವನ್ನೇ ನೀಡಿದೆ. ಪಟ್ಟಣ ಮತ್ತು ಗ್ರಾಮೀಣ ಎರಡೂ ಪ್ರದೇಶಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಯೋಜನೆಗಳು ನಮ್ಮ ಭಾಗಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ತಲುಪಿದ್ದು, ಈ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿವೆ. ಈ ಭಾಗದ ೬೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿರುವ  ಪಾರದರ್ಶಕವಾಗಿರುವ ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ರೈತರ ಜೀವನವನ್ನು ಸದೃಢಗೊಳಿಸಲಿವೆ. ಇದರಿಂದ ರೈತರ ಒಡೆತನದ ಸಕ್ಕರೆ ಕಾರ್ಖಾನೆಯ ಯೋಜನೆಯೂ ಇದ್ದು, ಇದು ರೈತರ, ಗ್ರಾಮೀಣ ಭಾಗದವರ ಏಳಿಗೆಗೆ ಸಹಕಾರಿಯಾಗಲಿದೆ.
ಮರೀಚಿಕೆ ಮತ್ತು ನಮ್ಮ ಭಾಗದವರಿಗೆ ಸರಳವಾಗಿ ಕೈಗೆಟುಕದಂತಿದ್ದ ಉನ್ನತ ಶಿಕ್ಷಣವು ನಮ್ಮ ಮನೆಯಂಗಳಕ್ಕೆ ಬಂದಿದೆ. ವೈದ್ಯಕೀಯ, ಇಂಇನಿಯರಿಂಗ್, ತೋಟಗಾರಿಕಾ ಕಾಲೇಜುಗಳು ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕೇಂದ್ರೀಯ ವಿದ್ಯಾಲಯಕ್ಕೆ ಅನುದಾನ ಹೀಗೆ ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಿದೆ. ಹಿಟ್ನಾಳ ಮತ್ತು ಬಂಡಿ ಹರ್ಲಾಪೂರಗಳಲ್ಲಿ ಡಿಗ್ರಿ ಕಾಲೇಜುಗಳು ನಮ್ಮ ಅವಧಿಯಲ್ಲೇ ಆದವುಗಳಾಗಿವೆ. ಇವುಗಳಲ್ಲದೇ ಸಿ.ಸಿ. ರಸ್ತೆ, ಕೊಳವೆ ಬಾವಿ ಮಂಜೂರಾತಿ, ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ ಇವೇ ಮುಂತಾದ ಪಾರದರ್ಶಕ ಮತ್ತು ಜನಪರ ಕೆಲಸಗಳನ್ನು ಬೇರೆ ಯಾವ ಪಕ್ಷವೂ ಮಾಡದ ರೀತಿಯಲ್ಲಿ ಶೀಘ್ರಗತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ. ಈ ಎಲ್ಲ ಯೋಜನೆಗಳೊಂದಿಗೆ ಇನ್ನೂ ನಮ್ಮ ಭಾಗಕ್ಕೆ ಸಲ್ಲಬೇಕಾಗಿರುವ ಅನೇಕ ಅಭಿವೃದ್ಧಿ ಯೋಜನೆಗಳು ಮುಂದುವರಿಯುವ ನಿಟ್ಟಿನಲ್ಲಿ, ಬಿ.ಜೆ.ಪಿ.ಗೆ ಮತ ಹಾಕಬೇಕು ಎಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ. ೦೨.೦೫.೧೩ ರಂದು ಕೊಪ್ಪಳ ಸಮೀಪದ ಬಂಡಿ ಹರ್ಲಾಪೂರ ಗ್ರಾಮದಲ್ಲಿ ಬಿ.ಜೆ.ಪಿ. ಪ್ರಚಾರ ಭಾಷಣದಲ್ಲಿ ಮತ ಯಾಚನೆ ಮಾಡುತ್ತ ಈ ಮೇಲಿನಂತೆ ನುಡಿದರು.
ಮಹಿಳಾ ಧುರೀಣೆ ಹೇಮಲತಾ ನಾಯಕ್ ಮಾತನಾಡಿ, ಕರಡಿ ಸಂಗಣ್ಣನವರು ಅಭಿವೃದ್ಧಿ ಹರಿಕಾರರಾಗಿದ್ದು, ಅವರು ಮಾಡಿದ ಕೆಲಸಗಳು, ತಂದ ಯೋಜನೆಗಳು ನಮ್ಮ ಕಣ್ಣ ಮುಂದೆಯೇ ಇದ್ದು, ಮೂಲಭೂತ ಸೌಕರ್ಯಗಳಿಂದ ಹಿಡಿದು, ಶಿಕ್ಷಣ, ಆರ್ಥಿಖ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ. ದಣಿವರಿಯದ ಜನನಾಯಕರಂತಿದ್ದು, ಅವರಿಂದ ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ, ರೈತರ ಸಾಲ ಮನ್ನಾ, ಮಕ್ಕಳಿಗೆ ಬಾಲ ಭವನ, ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಜಿಲ್ಲಾ ಕ್ರೀಡಾಂಗಣ, ಹೈ ಮಾಸ್ಕ್ ದೀಪಗಳು, ಹೀಗೆ ಹಲವಾರು ಉತ್ತಮ ಕೆಲಸಗಳು ಆಗಿದ್ದು, ನಮ್ಮ ಈ ಭಾಗದ ಅಭಿವೃದ್ಧಿಗಾಗಿ ಮತ್ತೆ ಅವರನ್ನು ಬೆಂಬಲಿಸಬೇಕೆಂದು ಹೇಳುತ್ತ ಮತ ಯಾಚನೆ ಮಾಡಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಪೀರಾಹುಸೇನ ಹೊಸಳ್ಳಿ, ವಿರೂಪಾಕ್ಷಪ್ಪ ನವೋದಯ ಬಾಬಾ ಅರಗಂಜಿ, ಹಾಲೇಶ ಕಂದಾರಿ ಮೊದಲಾದವರು ಉಪಸ್ಥಿತರಿದ್ದರು

Tuesday, April 30, 2013

ಕರಡಿ ಸಂಗಣ್ಣನವರ ಗೆಲುವಿಗೆ ದೀಡ್ ನಮಸ್ಕಾರ


೧ ಹುಲಗಿ : ಗ್ರಾಮದಲ್ಲಿ ಕೆ. ಕೃಷ್ಣಪ್ಪ ಪ್ಯಾರಮಾಳರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಹುಲಗಿ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಅಮರೇಶ ಅರಡಿ, ವೀರನ ಗೌಡ್ರ, ವಸಂತ ನಾಯಕ, ಬಸವರಾಜ, ಮುಸತ್ತಪ್ಪ, ವಿ.ಅಗಸಿ, ಗಾಳೇಶ, ವೀರಪಾಕ್ಷಿ, ಸಿದ್ದು ರಾಮಣ್ಣ, ಸಂಕ್ರಪ್ಪ ವಿಜಯ ಕರಡಿ, ಹುಲಗಿ ಮತ್ತು ಹೊಸಲಿಂಗಾಪೂರ ಗ್ರಾಮಸ್ತರು ಭಾಗವಹಿಸಿದ್ದರು.
೨. ಶಿವಪೂರ : ಗ್ರಾಮದಲ್ಲಿ ಲಿಂಗಪ್ಪ ತಂದೆ ಹನುಮಪ್ಪ ಮಾದಿನೂರ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಶಿವಪೂರ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಶಿವಪೂರ ಮರಿಯಪ್ಪ ಗಾಳೇಪ್ಪ ಗೋಣೆಪ್ಪ ಮತ್ತು ಊರಿನ ಜನರು ಭಾಗವಹಿಸಿದ್ದರು.
೩. ಬಸಾಪೂರ : ಗ್ರಾಮದಲ್ಲಿ ಮಿಲನ್ ಬಸಾಪೂರ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಬಸಾಪೂರ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಾಕ್ಷರಾದ ರಾಮುಲಮ್ಮ ನರಸಿಂಹಲು ಮಾನ್ವಿ ನಜೀರ ನರಸಿಂಹಯ್ಯ ಮತ್ತು ಊರಿನ ಜನರು ಭಾಗವಹಿಸಿದ್ದರು.

ರೈತರ ಒಡೆತನದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ : ಕರಡಿ ಸಂಗಣ್ಣ



ಕೋಳೂರು, ಕೊಪ್ಪಳ, ೩೦ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ಈ ಭಾಗದ ೪೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿವೆ. ೪೦,೦೦೦ ಎಕರೆಯಷ್ಟು ನೀರಾವರಿಯಾಗುವುದರಿಂದ ರೈತರ ಒಡೆತನದಲ್ಲಿಯೇ ಸಕ್ಕರೆ ಕಾರ್ಖಾನೆಯನ್ನು ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡುವದಾಗಿ, ಇಂತಹ ಅನೇಕ ಯೋಜನೆಗಳು ಈ ಭಾಗಕ್ಕೆ ತಲುಪುವಂತೆ ಕಾರ್ಯ ಮಾಡಲು ಮತ್ತೊಂದು ಅವಕಾಶ ಕೊಡಬೇಕೆಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ. ೩೦.೦೪.೧೩ ರಂದು ಕೊಪ್ಪಳ ಸಮೀಪದ ಕೋಳೂರು ಗ್ರಾಮದಲ್ಲಿ ಬಿ.ಜೆ.ಪಿ. ಪ್ರಚಾ


ರ ಭಾಷಣದಲ್ಲಿ ಮತ ಯಾಚನೆ ಮಾಡುತ್ತ ಈ ಮೇಲಿನಂತೆ ನುಡಿದರು. ಮುಂದುವರಿದು ಮಾತನಾಡಿದ ಅವರು ಪಟ್ಟಣ ಸಿ.ಸಿ. ರಸ್ತೆ, ಆಶ್ರಯ ಮನೆಗಳು, ಯುವಕರಿಗೆ ಸಾಲ ಸೌಲಭ್ಯ, ರೈತರ ಸಾಲ ಮನ್ನಾ, ಮಕ್ಕಳಿಗೆ ಬಾಲ ಭವನ, ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಜಿಲ್ಲಾ ಕ್ರೀಡಾಂಗಣ, ಹೈ ಮಾಸ್ಕ್ ದೀಪಗಳು, ಹೀಗೆ ಹಲವಾರು ಪ್ರಗತಿಪರ ಕೆಲಸಗಳು ಪಾರದರ್ಶಕವಾಗಿದ್ದು, ಅಭಿವೃದ್ಧಿ ಮತ್ತು ಹಿತಕ್ಕಾಗಿ ಬಿ.ಜೆ.ಪಿ. ಬೆಂಬಲಿಸಿ ತಮಗೆ ಮತ ಹಾಕಲು ವಿನಂತಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಪೀರಾಹುಸೇನ ಹೊಸಳ್ಳಿ, ವಿರೂಪಾಕ್ಷಪ್ಪ ನವೋದಯ ಮಾತನಾಡಿ ಕರಡಿ ಸಂಗಣ್ಣನವರ ಸರ್ವಾಂಗೀಣ ಅಭಿವೃದ್ಧಿಯನ್ನು, ಜಾತ್ಯತೀತ ಮನೋಭಾವವನ್ನು ಮೆಚ್ಚಿ ಮತ ನೀಡಿ ಗೆಲ್ಲಿಸಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿಭೋಜಪ್ಪ ಕುಂಬಾರ, ನೇಮಿರೆಡ್ಡಿ ಮೇಟಿ, ನಾಗರಾಜ ಗಾರವಾಡಮಠ, ದ್ಯಾಮಣ್ಣಗೌಡ ಗುಡ್ಡದಮೇಗಳ, ಮಹಾಂತೇಶ ಪಾಟೀಲ, ಶಿವಪುತ್ರಪ್ಪ ನಿಡಶೇಷಿ, ಚಂದ್ರು ಹಲಗೇರಿ, ಕಪ್ಪತ್ತಪ್ಪ, ಬಸಣ್ಣ ಕೊಡದಾಳ, ರಾಮಣ್ಣ ಪೂಜಾರ, ಗ್ರಾ.ಪಂ. ಸದಸ್ಯರಾದ ದೇವಪ್ಪ ಮತ್ತು ರಮೇಶ, ಶಾಶ್ವತಪ್ಪ ಡೊಳ್ಳಿನ, ರಾಮಣ್ಣ ಆಂಗಡಿ, ಮಲ್ಲಪ್ಪ ಹಡಪದ, ಬಸಣ್ಣ ಜೀರರ್, ಬಸಮ್ಮ ಹೂಗಾರ್ ಮೊದಲಾದವರು ಉಪಸ್ಥಿತರಿದ್ದರು.

ಮೇ ೧ ರಂದು ಪ್ರಹ್ಲಾದ್ ಜೋಶಿ ಕೊಪ್ಪಳಕ್ಕೆ


 ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರು ಮೇ ೧ ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಅವರು ಬಿ.ಜೆ.ಪಿ. ಪ್ರಚಾರ ಪ್ರಯುಕ್ತ ನಡೆಯುವ ಬಿ.ಜೆ.ಪಿ. ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ, ಗದಗ ರಸ್ತೆಯಲ್ಲಿರುವ ಗೌರಾ ಸಿಮೆಂಟ್ಸ್ ಫ್ಯಾಕ್ಟರಿ ಆವರಣದಲ್ಲಿ ಸಭೆ ನಡೆಯಲಿದ್ದು, ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕೊಪ್ಪಳ ಜಿಲ್ಲಾ ಎಲ್ಲ ಬಿ.ಜೆ.ಪಿ. ಮುಖಂಡರು ಭಾಗವಹಿಸಲಿದ್ದಾರೆ ಎಂದು ಬಿ.ಜೆ.ಪಿ. ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.

ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ : ಕರಡಿ ಸಂಗಣ್ಣ


ಗಬ್ಬೂರು, ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾ

ಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ಈ ಭಾಗದ ೪೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿವೆ. ಗಬ್ಬೂರು ಗ್ರಾಮವೂ ಸಹ ಸಿಂಗಟಾಲೂರು ಏತ ನೀರಾವರಿಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದೆ. ಸಂಪೂರ್ಣ ಜನಪರ ಧೋರಣೆ ಹೊಂದಿರುವ ಬಿ.ಜೆ.ಪಿ. ಪಕ್ಷಕ್ಕೆ ಮತ ಹಾಕಿ ತಮ್ಮನ್ನು ಗೆಲ್ಲಿಸಿ, ಮತ್ತಷ್ಟು ಯೋಜನೆಗಳು ಈ ಭಾಗಕ್ಕೆ ತಲುಪುವಂತೆ ಕಾರ್ಯ ಮಾಡಲು ಅವಕಾಶ ಕೊಡಬೇಕೆಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
 ಮುಂದುವರಿದು ಮಾತನಾಡಿದ ಅವರು ಪಟ್ಟಣ ಪ್ರದೇಶಕ್ಕೆ ಮೆಡಿಕಲ್, ಇಂಜಿನಿಯರಿಂಗ್, ತೋಟಗಾರಿಕಾ ಕಾಲೇಜು, ಗ್ರಾಮ ಪ್ರದೇಶಗಳಿಗೆ ಕೊಳವೆ ಬಾವಿ ಯೋಜನೆಗಳು, ಸಿ.ಸಿ. ರಸ್ತೆ, ಹಿಂದುಳಿದ-ದಲಿತರ ಕೇರಿಗಳಲ್ಲಿ ಮೂಲಭೂತ ಸೌಕರ್ಯಗಳು, ೪,೦೦೦ ಆಶ್ರಯ ಮನೆಗಳು ಹೀಗೆ ಹತ್ತು ಹಲವಾರು ಪ್ರಗತಿಪರ ಕೆಲಸಗಳು ಪಾರದರ್ಶಕವಾಗಿದ್ದು, ಅಭಿವೃದ್ಧಿ ಮತ್ತು ಹಿತಕ್ಕಾಗಿ ಬಿ.ಜೆ.ಪಿ. ಬೆಂಬಲಿಸಿ ತಮಗೆ ಮತ ಹಾಕಲು ವಿನಂತಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಮಾರುತೆಪ್ಪ ಹಲಗೇರಿ, ಕುಬೇರ ಮಜ್ಜಿಗಿ, ಸತ್ಯಪ್ಪ ಹರಿಜನ, ಶಾಬುದ್ಧೀನ ಸಾದ್, ಶ್ರೀಮತಿ ಸರೋಜಾ ಬಾಕಳೆ, ಶ್ರೀಮತಿ ಶಾಮಲಾ ಕೋನಕೋರ, ಸಂಗಮೇಶ ಡಂಬಳ, ಪಂಪಣ್ಣ ಪೂಜಾರ, ಅಮಾಜಪ್ಪ ಕುರಿ, ಮರ್ತುಜಾ ಸಾದ, ಭೀಮಪ್ಪ ಹರಿಜನ, ಪತ್ರೆಪ್ಪ ಮಜ್ಜಿಗಿ ಮೊದಲಾದವರು ಉಪಸ್ಥಿತರಿದ್ದರು.

Sunday, April 28, 2013

ಮತದಾರರಲ್ಲಿ ಮನವಿ


ಸಂಗಣ್ಣ ಕರಡಿ ಪರ ಪುತ್ರಿ ವಿನಿತಾ ವಿಜಯಕುಮಾರ ಬಿರುಸಿನ ಪ್ರಚಾರ


ಕೊಪ್ಪಳ, ಏ.೨೮: ಕೊಪ್ಪಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಸಂಗಣ್ಣ ಕರಡಿಯವರ ಪರ ಅವರ ಪುತ್ರಿ ವಿನಿತಾ ವಿಜಯಕುಮಾರ ಪಟ್ಟಣ ಶೆಟ್ಟಿ, ಸೊಸೆಯಂದಿರಾದ ಮಂಜುಳಾ ಅಮರೇಶ ಕರಡಿ, ಶೀಲ್ಪಾ ಗವಿಸಿದ್ದಪ್ಪ ಕರಡಿ  ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಅವರು ಸಮೀಪದ ಭಾಗ್ಯನಗರದ ಧನ್ವಂತರಿ ಕಾಲೋನಿಯಲ್ಲಿ ಪ್ರತಿ ಮನೆ ಮನೆಗಳಿಗೆ ತೆರಳಿ ತಂದೆಯವರ ಪುನರಾಯ್ಕೆಗೆ ಕೈಜೋಡಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಸರ್ವಾಂಗೀಣ ಅಭಿವ್ರೃದ್ಧಿ ಮೂಲಕ ಮಾದರಿ ಕ್ಷೇತ್ರವನ್ನಾಗಿಸುವುದೇ ತಂದೆಯವರ ಗುರಿಯಾಗಿದ್ದು ತಾವೆಲ್ಲಾ ಬೆಂಬಲಿಸವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮಹಿಳೆಯರು ಹಾಗೂ ಯುವಕಾರ್ಯಕರ್ತರು ಹಾಜರಿದ್ದರು.

ಚಾಕರಿ ಮಾಡಿದವರಿಗೆ ಬಾಕರಿ ಕೊಡಿ - ಗವಿಸಿದ್ಧಪ್ಪ ಕಂದಾರಿ



ಕೊಪ್ಪಳ, ೨೮ : ಕೊಪ್ಪಳ ಜಿಲ್ಲೆಯು ಶೈಕ್ಷಣಿಕವಾಗಿ ಅತ್ಯಂದ ಹಿಂದುಳಿದ ಪ್ರದೇಶವಾಗಿತ್ತು. ಅದನ್ನು ಹೋಗಲಾಡಿಸಲು ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಅಟಲ್ ಬಿಹಾರಿ ವಾಜಪೇಯಿ ಮದಿ ವಸತಿ ಶಾಲೆಗಳನ್ನು ತಂದು ಉನ್ನತ ಶಿಕ್ಷಣವು ನಮ್ಮ ಮನೆಯ ಅಂಗಳದಲ್ಲಿ ದೊರೆಯುವಂತೆ ಮಾಡಿದ ಕೀರ್ತಿ ಸಂಗಣ್ಣ ಕರಡಿ ಇವರಿಗೆ ಸಲ್ಲುತ್ತದೆ. ಅಲ್ಲದೇ ಕ್ಷೇತ್ರದ ಜನತೆಯ ಚಾಕರಿ ಮಾಡುವ ಸಮರ್ಥ ವ್ಯಕ್ತಿಯಾದ ಕರಡಿ ಸಂಗಣ್ಣನವರಿಗೆ ಮತ ಹಾಕುವುದರ ಮೂಲಕ ಬಾಕರಿ ಕೊಡಬೇಕೆಂದು ನಗರಸಭೆಯ ಮಾಜಿ ಅಧ್ಯಕ್ಷರಾದ ಗವಿಸಿದ್ಧಪ್ಪ ಕಂಚಾರಿ ಹೇಳಿದರು.
ಅವರು ದಿ. ೨೮.೦೪.೧೩ ರಂದು ಕಲಕೇರಿ ಗ್ರಾಮದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತ, ಕ್ಷೇತ್ರದರೈತರಿಗೆ ವರದಾನವಾಗಲಿರುವ ಸಿಂಗಟಾಲೂರು ಏತ ನೀರಾವರಿ, ಕೃಷ್ಣಾ ಬಿ ಸ್ಕೀಂ, ಬಹಾದ್ಧೂರ ಬಂಡಿ ಏತ ನೀರಾವರಿ, ಬೆಟಗೇರಿ ಏತ ನೀರಾವರಿಯಂತಹ ಯೋಜನೆಗಳು ಆರ್ಥಿಕ ಸಬಲತೆಗೆ ನಾಂದಿಯಾಗಿವೆ. ಅಲ್ಲದೇ ದಲಿತರ ಬಾಳು ಬೆಳಗಿಸುವಂತಹ ಗಂಗಾ ಕಲ್ಯಾಣ, ಸಮೂಹಿತ ನೀರಾವರಿಗಳ ಯೋಜನೆಗಳ ಮೂಲಕ ೮೦೦ ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಅಭಿವೃದ್ಧಿ ಪರವಾಗಿರುವ ಬಿ.ಜೆ.ಪಿ. ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಹೇಳಿದರು.
ತಾಲೂಕಾ ಪಂಚಾಯತ್ ಸದಸ್ಯರಾದ ಉಮೇಶ ಚಿಲವಾಡಗಿ ಮಾತನಾಡಿ ಬಿ.ಜೆ.ಪಿ. ಸರಕಾರವು ನಾಯಕ ಸಮುದಾಯದವರಿಗಾಗಿ ೧ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ, ಪರಿಶಿಷ್ಟ ಪಂಗಡಗಳ ಬಹುತೇಕ ಎಲ್ಲಾ ಕಾಲೊನಿಗಳಲ್ಲಿ ಸಿ.ಸಿ. ರಸ್ತೆ, ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕರಡಿ ಸಂಗಣ್ಣನವರು ಜಾತ್ಯಾತೀತ ನಾಯಕರಾಗಿದ್ದು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಜಾಣ್ಮೆಯನ್ನು ಹೊಂದಿದ್ದಾರೆಂದು, ಇವರಿಗೇ ಮತ ಹಾಕಿ ಗೆಲ್ಲಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೊಪ್ಪಳ ಭಾರತೀಯ ಜನತಾ ಪಕ್ಷದ ನಿಯೋಜಿತ ಅಭ್ಯರ್ಥಿ ಕರಡಿ ಸಂಗಣ್ಣ, ಪೀರಾಹುಸೇನ ಹೊಸಳ್ಳಿ, ಶಾಮಲಾ ಕೋನಾಪುರ, ಬಾಬಾ ಆರಗಂಜಿ, ಪುಟ್ಟರಾಜ ಬೇವಿನಹಳ್ಳಿ, ದೌಲತ್ ಚಿಕ್ಕಲಗಾರ, ವಿರೂಪಾಕ್ಷಗೌಡ ಕಲಕೇರಿ, ಶಿವಣ್ಣ ಒಂಟೆತ್ತಿನವರ, ಮನ್ನೇಸಾಬ್, ಭರಮಪ್ಪ ಮುದ್ದಾಬಳ್ಳಿ, ಕೀಮಪ್ಪ ಲಮಾಣಿ, ಹೇಮಲತಾ ನಾಯಕ್, ಬೀರಪ್ಪ ಅಂಗಡಿ, ರಾಮಣ್ಣ ವಡ್ಡರ್, ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನವರದು ಒಡೆದಾಳುವ ನೀತಿ : ಮಾರುತೆಪ್ಪ ಹಲಗೇರಿ



ಗಿಣಗೇರಿ, ೨೬ : ಕಾಂಗ್ರೆಸ್‌ನವರು ಕಳೆದ ೬೦ ವರ್ಷಗಳಿಂದ ದಲಿತರು, ಹಿಂದುಳಿದವರನ್ನು ಮತ್ತು ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಳ್ಳುತ್ತ, ಅವರಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ, ಒಡೆದಾಳುವ ನೀತಿಯನ್ನು ಅನುಸರಿಸುತ್ತ ದಲಿತರಿಗೆ ದ್ರೋಹವನ್ನು ಬಗೆದಿದೆ ಎಂದು ಎ.ಪಿ.ಎಂ.ಸಿ. ನಿರ್ದೇಶಕ ಮಾರುತೆಪ್ಪ ಹಲಗೇರಿ ಹೇಳಿದರು.
ಅವರು ದಿ. ೨೭.೦೪.೧೩ ರಂದು ಗಿಣಿಗೇರಿಯಲ್ಲಿ ನಡೆದ ಬಿ.ಜ.ಪಿ. ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ಇವರ ಪ್ರಚಾರ ಕಾರ್ಯದಲ್ಲಿ ಮಾತನಾಡುತ್ತ, ಕಾಂಗ್ರೆಸ್ ಪಕ್ಷವು ದಲಿತರಿಗೆ ಸಾರಾಯಿ ಕುಡಿಸುತ್ತ, ಓಟ್ ಪಡೆದುಕೊಂಡು ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಸ್ವತಂತ್ರ ಪೂರ್ವದಲ್ಲಿ ದಲಿತರು ಯಾವ ಸ್ಥಿತಿಯಲ್ಲಿದ್ದರೋ ಸ್ವಾತಂತ್ರ್ಯಾನಂತರದ ೬೦ ವರ್ಷಗಳವರೆಗೂ ಬಹುತೇಕ ಹಳ್ಳಿಗಳಲ್ಲಿ ಇದೇ ಸ್ಥಿತಿ ಇತ್ತು. ಇದಕ್ಕೆ ೬೦ ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷವೇ ಕಾರಣ. ಕಳೆದ ೫ ವರ್ಷಗಳ ಬಿ.ಜೆ.ಪಿ. ಸರಕಾರ ಅಸ್ವಿತ್ವಕ್ಕೆ ಬಂದಾಗಿನಿಂದ ದಲಿತರನ್ನು ಸಮಾಜದ ಮುಖ್ಯ ವಾಹಿನಿ ತರಲು, ಅವರನ್ನು ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡಲು ಆಶ್ರಯ ಮನೆಗಳ ವಿತರಣೆ, ದಲಿತ ಕಾಲೊನಿಗಳಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವಿಕೆ,, ಅರ್ಥಿಕವಾಗಿ ಸಬಲರಾಗಲು ಗಂಗಾ ಕಲ್ಯಾಣ ಯೋಜನೆ, ದಲಿತರ ಕಾಲೊನಿಗಳಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಸಾಮೂಹಿಕ ಏತ ನೀರಾವರಿ, ಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಸಾಲಸೌಲಭ್ಯ ಹೀಗೆ ಹತ್ತಾರು ಪ್ರಗತಿಪರ ಯೋಜನೆಗಳಿದ ದಲಿತರು ಮುಂದೆ ಬರಲು ಬಿ.ಜೆ.ಪಿ. ಸರಕಾರ ಕಾರಣವಾಗಿದೆ. ಸ್ವತಂತ್ರ ಬಂದಾಗಿನಿಂದ ಆಡಳಿತ ನಡೆಸಿದ ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣದಿಂದ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯವಾಗಿದ್ದು, ಪ್ರಗತಿಪರ, ಅಭಿವೃದ್ಧಿ ಪರ ಮನಸ್ಸುಳ್ಳ ಭಾರತೀಯ ಜನತಾ ಪಕ್ಷದ ಕರಡಿ ಸಂಗಣ್ಣನವರಿಗೆ ಮತ ಹಾಕಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ನಿಯೋಜಿತ ಅಭ್ಯರ್ಥಿ ಕರಡಿ ಸಂಗಣ್ಣ, ನಗರಸಭಾ ಮಾಜಿ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಎಸ್.ಕೆ. ವಕ್ಕಳದ, ವಿರೂಪಾಕ್ಷಪ್ಪ ನವೋದಯ, ಪೀರಾಹುಸೇನ ಹೊಸಳ್ಳಿ, ರಶೀದ್ ಸಾಬ್ ಮಿಠಾಯಿ, ಹೇಮಲತಾ ನಾಯಕ್, ಶೇಖgಪ್ಪ ಇಂದರಗಿ, ಕರಿಯಪ್ಪ ಮೇಟಿ ಮುಂತಾದವರು ಉಪಸ್ಥಿತರಿದ್ದರು.

ರೈತರು ಮತ್ತು ವರ್ತಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ - ಇಬ್ಬರ ಅಭಿವೃದ್ಧಿಗೂ ಬಿ.ಜೆ.ಪಿ. ಕಟಿಬದ್ಧ : ಕರಡಿ ಸಂಗಣ್ಣ



ಕೊಪ್ಪಳ,


 : ಕೃಷಿ ಮಾರುಕಟ್ಟೆ ಸಮಿತಿಗಳು ರೈತರ ಪರವಾಗಿದ್ದು ಅವರ ಬೆಳವಣಿಗೆಗೆ ವರ್ತಕರ ಅಥವಾ ವ್ಯಾಪಾರಸ್ಥರ ಪಾತ್ರವೂ ಬಹಳ ಅಗತ್ಯ. ಅಲ್ಲದೇ ಕೊಪ್ಪಳದ ವರ್ತಕರು ತುಂಬಾ ಪಾರದರ್ಶಕವಾಗಿ ವ್ಯವಹಾರ ನಡೆಸುವವರಾಗಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ನಿಯೋಜಿತ ಅಭ್ಯರ್ಥಿ ಕರಡಿ ಸಂಗಣ್ಣ ಅಭಿಪ್ರಾಯ ಪಟ್ಟರು.
ಅವರು ೨೬.೦೪.೧೩ ರಂದು ಕೊಪ್ಪಳ ನಗರದ ಗಂಜ್‌ನಲ್ಲಿ ಬಿ.ಜೆ.ಪಿ. ಪ್ರಚಾರ ಸಭೆಯ ವೇಳೆ ಭಾಗವಹಿಸಿ ಈ ಮೇಲಿನಂತೆ ಮಾತನಾಡಿದರು.
ಕೊಪ್ಪಳದ ಎ.ಪಿ.ಎಂ.ಸಿ.ಯಲ್ಲಿ ಈಗಾಗಲೇ ಮೂಲಭೂತ ಸೌಕರ್ಯಗಳಾದ ಗುಣಮಟ್ಟದ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣವಾಗಿವೆ. ಇದಲ್ಲದೇ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಮಾಲರಿಗೆ ನಿವೇಶನ ಹಂಚಿಕೆ ಪ್ರಗತಿಯಲ್ಲಿದೆ. ಉತ್ತಮ ಸರಕಾರಿ ಮಾರುಕಟ್ಟೆ ನೀಡಲಿಕ್ಕೂ ಈಗಾಗಲೇ ಆದ್ಯತೆ ನೀಡಲಾಗಿದೆ. ಹುಲಿಗಿಯಲ್ಲಿ ಗೋದಾಮು ನಿರ್ಮಿಸಲಾಗಿದೆ. ಬೆಟಗೇರಿಯಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣವಾಗಿದೆ. ಅಲ್ಲದೇ ಎಲೆಕ್ಟ್ರಾನಿಕ್ ತೂಕದ ಮೂಲಕ ನಡೆಯುವ ಮಾರುಕಟ್ಟೆ ವ್ಯವಹಾರ ಹಮಾಲರಿಗೆ ಮತ್ತು ರೈತರಿಗೆ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.
ಬಿ.ಜೆ.ಪಿ. ಸರಕಾರವು ರೈತರ ಪರವಾಗಿದ್ದು, ರೈತರಿಗಾಗಿಯೇ ವಿಶೇಷ ಕೃಷಿ ಬಜೆಟ್ ಮಂಡನೆ ಮಾಡಿದೆ. ಕೊಪ್ಪಳದಲ್ಲಿ ರೈತರ ಬಾಳನ್ನು ಹಸನಾಗಿಸಲು ೪೦ ಸಾವಿರ ಎಕರೆಯ ಸಿಂಗಟಾಲೂರ ಏತ ನೀರಾವರಿ ಯೋಜನೆ, ಬೆಟಗೇರಿ ಏತ ನೀರಾವರಿ ಯೋಜನೆ, ಬಹಾದ್ಧೂರ ಬಂಡಿ ಏತ ನೀರಾವರಿ ಯೋಜನೆಯಂತಹ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರು ಆರ್ಥಿಕವಾಗಿ ಸಬಲರಾಗಲು ಸಹಾಯಕವಾಗಿದೆ. ರೈತರು ಸಬಲರಾದರೆ ವ್ಯಾಪಾರವು ಅಭಿವೃದ್ಧಿ ಹೊಂದುತ್ತದೆ. ರೈತರು ಮತ್ತು ವರ್ತಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಪರಸ್ಪರ ಅವಲಂಬಿತರು. ಇವರೀರ್ವರ ಅಭಿವೃದ್ಧಿಗಾಗಿ ಬಿ.ಜೆ.ಪಿ. ಸರಕಾರ ಹಲವು ಯೋಜನೆಗಳ ಅನುಷ್ಟಾನ ತಂದಿದೆ. ಮತ್ತಷ್ಟು ಅಭಿವೃದ್ಧಿಗಳಿಗಾಗಿ, ಅಭಿವೃದ್ಧಿಪರ ಧೋರಣೆಗಳಿರುವ ಬಿ.ಜೆ.ಪಿ.ಗೆ ಮತ ಹಾಕಿ ಬಹುಮತದಿಂದ ಗೆಲ್ಲಿಸಲು ಕರಡಿ ಸಂಗಣ್ಣ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಈರಣ್ಣ ಬುಳ್ಳಾ ಇವರ ಅಂಗಡಿಯಲ್ಲಿ ನಡೆದ ಬಿ.ಜೆ.ಪಿ. ಪ್ರಚಾರಸಭೆಯಲ್ಲಿ ರಾಮಣ್ಣ, ಮಹಿಬೂಬ್‌ಸಾಬ್ ಇವರ ನೇತೃತ್ವದಲ್ಲಿ ಹಲವಾರು ಹಮಾಲರು ಬಿ.ಜೆ.ಪಿ.ಯನ್ನು ಸೇರಿ, ಕರಡಿ ಸಂಗಣ್ಣನವರ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದರು.
ನಂತರ ಎ.ಪಿ.ಎಂ.ಸಿ. ವರ್ತಕರ ಅಂಡಿಗಳಿಗೆ ತೆರಳಿ ಮತ ಯಾಚಿಸಲಾಯಿತು. ಮತ ಯಾಚನೆಯ ಸಂದರ್ಭದಲ್ಲಿ ಈರಣ್ಣ ಬುಳ್ಳಾ, ಎ.ಪಿ.ಎಂ.ಸಿ. ನಿರ್ದೇಶಕ ಕಮಲ್ ಜಾಂಗಡಾ, ಲತೀಫ ಗೊಂಡಬಾಳ, ಗೌಸ್ ಗೊಂಡಬಾಳ, ಮಲಿಕ್‌ಸಾಬ್, ಬಸವರಾಜ ಗಂಗಾವತಿ, ಪಂಪಣ್ಣ ಹೊಸಳ್ಳಿ, ಹೇಮಣ್ಣ, ಶ್ರೀನಿವಾಸ ಶ್ರೇಷ್ಠಿ, ವಿರುಪಣ್ಣ ಕೆಂಗೇರಿ, ಮಹ್ಮದ್‌ಸಾಬ್ ಬಹಾದ್ಧೂರ ಬಂಡಿ, ಈರಣ್ಣ ಕೊಳ್ಳಿ, ಪರಮೇಶ ಚಕ್ಕಿ, ಲಿಂಗಯ್ಯ ಚೌಕಿಮಠ, ಸತೀಶ ಕೊತಬಾಳ, ವೆಂಕಟೇಶ ಇಂದರಗಿ, ಶ್ರೀನಿವಾಸ ಮೆಣೆದಾಳ, ಬಸವರಾಜ ತಂಬ್ರಳ್ಳಿ, ಶ್ರೀನಿವಾಸ ಕಂಪ್ಲಿಕರ್, ಮಾಜಿ ಎ.ಪಿ.ಎಂ.ಸಿ. ನಿರ್ದೇಶಕರ ಭೋಜಪ್ಪ ಕುಂಬಾರ, ನಾಗರಾಜ ಗಾರವಾಡಮಠ, ನೇಮಿರೆಡ್ಡಿ ಮೇಟಿ, ಖಾಜಾ ಹುಸೇನ ರೇವಡಿ, ಚಂದುಸಾಬ, ಮಹೇಶ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

Friday, April 26, 2013

ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ : ಕರಡಿ ಸಂಗಣ್ಣ



















ಕಿಡದಾಳ : ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡಲು, ಬಿ.ಜೆ.ಪಿ. ಸರಕಾರವು 'ಉದ್ಯಮಿಯಾಗು-ಉದ್ಯೋಗ ನೀಡು' ಎನ್ನುವಂತಹ ಮಹತ್ತರವಾದ ಯೋಜನೆಯನ್ನು ಜಾರಿಗೊಳಿಸಿ, ಯುವಶಕ್ತಿಯನ್ನು ಕೈಗಾರಿಕೋದ್ಯಮಿಗಳನ್ನಾಗಿಸುವಲ್ಲಿ ಶ್ರಮಿಸಿದೆ. ಅಲ್ಲದೇ ಕೊಪ್ಪಳದಲ್ಲಿಯೂ ಬಸಾಪುರ ಗ್ರಾಮದ ಬಳಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಧೇಶಕ್ಕಾಗಿ ೧೧೦ ಎಕರೆ ಜಮೀನು ಖರೀದಿಗೆ ಹಣ ಮಂಜೂರಾಗಿದೆ ಎಂದು ಹೇಳಿದರು.
ಕೊಪ್ಪಳದ ಕಿಡದಾಳ ಗ್ರಾಮದಲ್ಲಿ ದಿ. ೨೬ ರಂದು ಹಮ್ಮಿಕೊಳ್ಳಲಾಗಿದ್ದ ಬಿ.ಜೆ.ಪಿ. ಪ್ರಚಾರಾರ್ಥ ಸಭೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಮಾತನಾಡುತ್ತ ಈ ಮೇಲಿನಂತೆ ನುಡಿದರು.
ಗಿಣಗೇರಾ ಗ್ರಾಮದಲ್ಲಿ ಯುವಕರಿಗೆ ವೃತ್ತಿ ಪರತೆಯನ್ನು ಮತ್ತು ಉದ್ಯೋಗದಲ್ಲಿ ಕೌಶಲ್ಯತೆಯನ್ನು ಸ್ಥಾಪಿಸಲು ವೃತ್ತಿ ತರಬೇತಿ ಕೇಂದ್ರ ಮಂಜೂರಾಗಿದೆ ಎಂದು ಹೇಳಿದರು. ಯುವಶಕ್ತಿ ಆರ್ಥಿಕವಾಗಿ ಪ್ರಬಲವಾಗಿ ಸಮುಜಮುಖಿಯಾಗುವತ್ತ ಬಿ.ಜೆ.ಪಿ. ಸರಕಾರದ ಯೋಜನೆಗಳು ಸಹಾ
ಯಕವಾಗಲಿವೆ ಎಂದು ಹೇಳಿದರು. ಅಲ್ಲದೇ ಬಿ.ಜೆ.ಪಿ. ಸರಕಾರದ ಆಡಳಿತದಲ್ಲಿ ಕೊಪ್ಪಳದಲ್ಲಿ ಆದ ಅಭಿವೃದ್ಧಿ ಕೆಲಸಗಳು ಪಾರದರ್ಶಕವಾಗಿದ್ದು, ನಮ್ಮ ಅಭಿವೃದ್ಧಿಪರ ಧೋರಣೆಗಳಿಗೆ ಈ ಸಲವೂ ತಮ್ಮ ಮತ ನೀಡಬೇಕೆಂದು ಅವರು ಕೇಳಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ ಮಾತನಾಡಿ ಕರಡಿ ಸಂಗಣ್ಣನವರ ಅಧಿಕಾರವಧಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಪ್ರಗತಿ ಅತ್ಯುತ್ತಮವಾಗಿದ್ದು, ಅವರು ಅನೇಕ ಯೋಜನೆಗಳನ್ನು ತಂದು ಈ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಈ ಸಲ ಅವರನ್ನು ಬಹುಮತದಿಂದ ಆರಿಸಿ ತರಲು ವಿನಂತಿಸಿದರು.
ಇನ್ನೋರ್ವ ಬಿ.ಜೆ.ಪಿ. ಮುಖಂಡ ರಾಘವೇಂದ್ರ ಪಾನಘಂಟಿ ಮಾತನಾಡಿ, ಬಿ.ಜೆ.ಪಿ. ಸರಕಾರವು ಪ್ರಗತಿದಾಯಕ ಸರಕಾರವಾಗಿದ್ದು, ಕರಡಿ ಸಂಗಣ್ಣನವರು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೆಡಿಕಲ್, ಇಂಜಿನಿಯರಿಂಗ್, ತೋಟಗಾರಿಕಾ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಕ್ಕೆ ಹಣ ಮಂಜೂರಾತಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮಂಜೂರು, ೮೦೦ ಕೊಳವೆ ಬಾವಿಗಳ ಮಂಜೂರಾತಿ, ಹೀಗೆ ಪಟ್ಟಣ ಮತ್ತು ಗ್ರಾಮ್ಯ ಪರಿಸರ ಎರಡಕ್ಕೂ ಅನುಕೂಲವಾಗುವಂತಹ ಜನಪರ ಕೆಲಸಗಳನ್ನು ಮಾಡಿದ್ದಾರೆ. ಇವರನ್ನು ಮತ್ತೊಮ್ಮೆ ಗೆಲ್ಲಿಸಿ ತಂದು ಅಭಿವೃದ್ಧಿಯ ಪಥದತ್ತ ನಾವು ಸಾಗಬೇಕು ಎಂದು ಹೇಳಿ ಬಿ.ಜೆ.ಪಿ. ಪರವಾಗಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡರಾದ ಸಂಗಪ್ಪ ವಕ್ಕಳದ, ಪೀರಾಹುಸೇನ ಹೊಸಳ್ಳಿ, ಫಕೀರಪ್ಪ ಆರೇರ್, ವಿರೂಪಾಕ್ಷಪ್ಪ ನವೋದಯ, ವಿರೂಪಾಕ್ಷಯ್ಯ ಗದಗಿನಮಠ, ಮರುಳಸಿದ್ಧಪ್ಪ, ನೇಮಿರಡ್ಡಿ, ಮಹಿಳಾ ಘಟಕದ ಹೇಮಲತಾ ನಾಯಕ್, ಶ್ಯಾಮಲಾ ಕೋನಕೋರ, ವೇದಾ ಜೋಶಿ, ಸರೋಜಾ ಬಾಕಳೆ, ಮಾರುತೆಪ್ಪ ಹಲಗೇರಿ, ಮಾಜಿ ಜಿ.ಪಂ. ಸದಸ್ಯ ಸುರೇಶ ಕುಲಕರ್ಣಿ, ಕರಿಯಪ್ಪ ಮೇಟಿ, ನಾಗರಾಜ ಕಿಡದಾಳ, ಹನುಮಂತಪ್ಪ ಚೌಡ್ಕಿ, ಗ್ಯಾನಪ್ಪ ಬಸಾಪುರ, ವೀರಭದ್ರಪ್ಪ ಗದಗ, ಕುಟುಗನಹಳ್ಳಿ ದೇಸಾಯಿ, ಶೇಖರ ಇಂದರಗಿ, ಪರಮೇಶ್ವರಗೌಡ ಪಾಟೀಲ ಮತ್ತಿತರ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ಬಸಾಪುರ, ಕುಟುಗನಹಳ್ಳಿ ಗ್ರಾಮಗಳಲ್ಲಿಯೂ ಯಶಸ್ವಿ ಮತಯಾಚನೆ ನಡೆಯಿತು.

Sunday, April 21, 2013

ಕರಡಿ ಸಂಗಣ್ಣ ಗೆಲುವು ನಿಶ್ಚಿತ - ಹಾಲಪ್ಪ ಆಚಾರ್


ಬೆಟಗೇರಿ ೨೦ : ಮೂಲತಃ ರೈತ ಕುಟುಂಬದಿಂದ ಬಂದ ಸಂಗಣ್ಣ ಕರಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಆಂತಃಕರಣವನ್ನು ಹೊಂದಿರುವ ನಾಯಕನಾಗಿದ್ದು, ಕ್ಷೇತ್ರವನ್ನು ನೀರಾವರಿಯನ್ನಾಗಿಸುವದರಲ್ಲಿ ಜಾರಿಗೊಳಿಸಿದ ಸಿಂಗಟಾಲೂರ ಏತ ನೀರಾವರಿ ಪ್ರಮುಖವಾಗಿದೆ. ಅವರ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಹೇಳಿದರು.
ಅವರು ಬೆಟಗೇರಿಯಲ್ಲಿನ ಭಾರತೀಯ ಜನತಾ ಪಕ್ಷದ ಚುನಾವಣೆ ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಿ ಈ ಮೇಲಿನಂತೆ ಮಾಡಿದರು. ಅವರು ಮುಂದುವರಿದು ದಲಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಸಂಗಣ್ಣನವರು ದಲಿತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ವೈಯಕ್ತಿಕ ಕೊಳವೇ ಬಾವಿಗಳನ್ನು ಕೊರೆಸಿದ್ದಾರೆ. ಸಾಮೂಹಿಕ ನೀರಾವರಿಯಂತಹ ಮಹತ್ತರವಾದ ಯೋಜನೆಗಳನ್ನು ಜಾರಿಗೊಳಿಸಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
 ಇದೇ ಸಮಾರಂಭದಲ್ಲಿ ಮಾತನಾಡಿದ ಪಕ್ಷದ ಅಲ್ಪ ಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೀರಾಹುಸೇನ ಹೊಸಳ್ಳಿ ಮಾತನಾಡಿ, ಕಾಂಗ್ರೆಸ್‌ನವರು ೬೦ ವರ್ಷ ಆಳ್ವಿಕೆ ನಡೆಸಿ ಅಲ್ಪಸಂಖ್ಯಾತರನ್ನು ಓಟ್‌ಬ್ಯಾಂಕಿಗಾಗಿ ಮಾಡಿಕೊಂಡು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಆದರೆ ಬಿ.ಜೆ.ಪಿ. ಸರ್ಕಾರವು ಕೊಪ್ಪಳದ ಮರ್ದಾನ್‌ಗೈಬ್ ದರ್ಗಾ ಹಾಗೂ ಶಾದಿ ಮಹಲ್ ನಿರ್ಮಾಣಕ್ಕಾಗಿ ೫೦ ಲಕ್ಷ ರೂ.ಗಳ ಕೊಡುಗೆ ನೀಡಿದ್ದಲ್ಲದೇ ಮಸೀದಿಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದರು.
 ಈ ಸಂದರ್ಭದಲ್ಲಿ ನ್ಯಾಯವಾದಿಗಳಾ ವಿ.ಎಂ. ಭೂಸನೂರಮಠ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ವೀರೇಶ ಲಕ್ಷಾಣಿ, ತಾಲೂಕ ಪಂಚಾಯತ್ ಸದಸ್ಯ ವೀರೇಶ ಸಜ್ಜನ್, ಮುಖಂಡರಾದ ಕೃಷ್ಣಾರೆಡ್ಡಿ, ಮಹಾಂತೇಶ ಪಾಟೀಲ ಮತ್ತಿತರ ಹಿರಿಯ, ಯುವ ಮುಖಂಡರು ಭಾಗವಹಿಸಿದ್ದರು.

 ಕಾಂಗ್ರೆಸ್‌ನಿಂದ ಬಿ.ಜೆ.ಪಿ.ಗೆ ಸೇರ್ಪಡೆ
ಬೆಟಗೇರಿ, ೨೦ : ಕರಡಿ ಸಂಗಣ್ಣನವರ ಕ್ಷೇತ್ರಾಭಿವೃದ್ಧಿ ಕೆಲಸಗಳನ್ನು ಮೆಚ್ಚಿ, ಅವರ ಕೈ ಬಲ ಪಡಿಸಲು ನಿರ್ಧರಿಸಿ ಬೆಟಗೇರಿಯ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮೈಲಪ್ಪ ನಡುವಿನಮನಿ, ಮಲ್ಲಪ್ಪ ಗುಡಿಹಿಂದಿನ, ಸುಂಕಪ್ಪ ಹಿರೇಮನಿ, ಮಲ್ಲಪ್ಪ ಗುಡಿಮುಂದಿನ, ರಮೇಶ ನಡುವಿನಮನಿ, ಯಂಕಪ್ಪ ಪೂಜಾರ, ರಮೇಶ ಜಟೆಮ್ಮನವರ, ಮೈಲಾರಪ್ಪ ಹಿರೇಮನಿ, ಮಲ್ಲಪ್ಪ ಮತ್ತೂರ, ಶಿವಪ್ಪ ಗುಡಿಹಿಂದಲ ಸೇರಿದಂತೆ ೫೦ ಕ್ಕೂ ಹೆಚ್ಚು ಯುವಕರು ಬಿ.ಜೆ.ಪಿ. ಸೇರ್ಪಡೆಯಾದರು. ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಎಲ್ಲರನ್ನೂ ಆತ್ಮೀಯವಾಗಿ ಪಕ್ಷಕ್ಕೆ ಸೇರಿಸಿಕೊಂಡು, ಪಕ್ಷದ ಬಲವರ್ಧನೆ ಮತ್ತು ಜಯಕ್ಕೆ ಕಾರಣರಾಗಲು ಕರೆಕೊಟ್ಟರು.

 ಸಮಗ್ರ ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ - ಕರಡಿ ಸಂಗಣ್ಣ




ಕಾತರಕಿ, ೨೦ : ಸಮಗ್ರ ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ, ನನ್ನನ್ನು ಬಹುಮತದ ಮೂಲಕ ಆರಿಸಿ ತರಬೇಕೆಂದು ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಕಾತರಕಿ ಗ್ರಾಮದ ಪ್ರಚಾರ ಸಭೆಯಲ್ಲಿ ವಿನಂತಿಸಿಕೊಂಡರು. ಕೃಷಿಯ ಆದ್ಯತೆಯ ಜೊತೆಗೆ ಇರುವ ಎಲ್ಲ ಮೂಲಭೂತ ಸೌಕರ್ಯಗಳ ಅನುಷ್ಟಾನ, ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ತಂದ ಮೂರು ಮೆಡಿಕಲ್, ಇಂಜಿನಿಯರಿಂಗ್, ತೋಟಗಾರಿಕಾ ಕಾಲೇಜುಗಳು, ಗ್ರಾಮ್ಯ ಪರಿಸರಕ್ಕೆ ವಿದ್ಯುತ್ ಪೂರೈಕೆಗಾಗಿ ಶಾಶ್ವತ ವ್ಯವಸ್ಥೆ ಹೀಗೆ ಹಲವು ಅಭಿವೃದ್ಧಿ ಯೋಜನೆಗಳು ಈಗಾಗಲೇ ಆರಂಭವಾಗಿದ್ದು, ಮತ್ತೊಂದು ಅವಧಿಗೆ ತಮ್ಮನ್ನು ಚುನಾಯಿಸಿ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುಂತಹ ಕೆಲಸ ಮಾಡಲು ಅವಕಾಶ ಕೊಡಲು ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೃಷ್ಣಾರೆಡ್ಡಿ, ವಿ.ಎಂ. ಭೂಸನೂರಮಠ, ವೀರಣ್ಣ ಗಾಣಿಗೇರ, ನೇಮಿರೆಡ್ಡಿ, ಹಾಲೇಶ ಕಂದಾರಿ, ಮಹಾಂತೇಶ ಹಿರೇಮಠ, ಗವಿಸಿದ್ಧಪ್ಪ ಚಿನ್ನೂರು ಮತ್ತಿತರರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ, ಕರಡಿ ಸಂಗಣ್ಣನವರಿಗೆ ಬೆಂಬಲ ಸೂಚಿಸಿದರು.

 ಕಾಂಗ್ರೆಸ್ ತೊರೆದು ಬಿ.ಜೆ.ಪಿ.ಗೆ
ಭಾಗ್ಯನಗರ, ೨೧ : ಭಾಗ್ಯನಗರದ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ ಮಾಲಗಿತ್ತಿ, ವೆಂಕಟೇಶ ಮಾಲಗಿತ್ತಿ ಸೇರಿದಂತೆ ಕುಮಾರ, ಸಂತೋಷ, ಅನಿಲ ಸಂಗಟಿ, ಸುನೀಲ ಗಂಗೂರ, ಸುನೀಲ ಸಂಗಟಿ, ಸಿದ್ದು, ಶರಣಪ್ಪ, ನಾಗರಾಜ, ವಿನಾಯಕ, ವಿನೋದ, ಶಿವು ಮೇಟಿ, ಹನುಮಂತ, ಗವಿಸಿದ್ಧಪ್ಪ ಕೆಂಚಗುಂಡಿ, ನಾಗರಾಜ, ಚೇತನ ಬಣ್ಣದ, ಅನಂದ ಕೆಂಚಗೇರಿ, ಕಾರ್ತಿಕ ಗಂಗೂರ, ನಭಿ ನದಾಫ್, ಕಾಳಿದಾಸ ಮೊದಲಾದವರು ಶಾಸಕ ಹಾಗೂ ಬಿ.ಜೆ.ಪಿ. ಕೊಪ್ಪಳದ ವಿಧಾನಸಭಾ ಅಭ್ಯರ್ಥಿ ಕರಡಿ ಸಂಗಣ್ಣನವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿ.ಜೆ.ಪಿ.ಯನ್ನು ಸೇರಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಲಿಂಗಪ್ಪ ಮೆಣಸಿನಕಾಯಿ, ಶ್ರೀನಿವಾಸ ಹ್ಯಾಟಿ, ಕೃಷ್ಣ ಮ್ಯಾಗಳಮನಿ, ಕೊಟ್ರೇಶ ಶೇಡ್ಮಿ, ಸರೋಜಾ ಬಾಕಳೆ, ಸತೀಶ ಮೇಘರಾಜ, ಸುರೇಶ ದೊಣ್ಣಿ, ಪುಟ್ಟರಾಜ ಬೇವಿನಹಳ್ಳಿ ಉಪಸ್ಥಿತರಿದ್ದರು.

ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ


ಬಸಾಪುರ ೨೦ : ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳನ್ನು ಮತ್ತು ಸಂಗಣ್ಣ ಕರಡಿಯವರ ಅಭಿವೃದ್ಧಿಪರ ಧೋರಣೆಗಳನ್ನು ಮೆಚ್ಚಿ, ಬಸಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಮಸೂದ್‌ಸಾಬ ಇವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿ.ಜೆ.ಪಿ. ಕೊಪ್ಪಳ ವಿಧಾನಸಭಾ ಅಭ್ಯರ್ಥಿ ಸಂಗಣ್ಣ ಕರಡಿಯವರು ಮಸೂದ್‌ಸಾಬ್ ಇವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡ ವಿ.ಎಂ. ಭೂಸನೂರಮಠ, ಬ್ರಹ್ಮಯ್ಯ, ನಜೀರಸಾಬ ನರಸಿಂಹಲು ಮತ್ತು ಗ್ರಾಮದ ಯುವ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇವರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಟಮ್ಮ, ಅಂಜಿನಿ, ಮಿಲನಪ್ಪ, ಚಾಂದ್‌ಪಾಶ, ಉಸ್ಮಾನ್, ಲಾಲ್‌ಸ್ವಾಮಿ, ಕಾಶಿಂ ಅಲಿ, ಅಲಿ, ಶ್ರೀನಿವಾಸ, ನಾಗರಾಜ, ಕಡೂರ ನಾಗರಾಜ, ಜಾಕಿರಸಾಬ, ದರ್ಶನ್ ಸಾಬ, ಮೌಲಾಲಿಸಾಬ, ಮುರುಗೇಶ, ಹನುಮಂತ ವಡ್ಡರ್, ಖಾಜಾಸಾಬ, ಪರಶುರಾಮ, ಬಸವರಾಜ, ಯಲ್ಲಪ್ಪ, ಈರಣ್ಣ ಗುಂತಕಲ್, ಬಸವರಾಜ ಹೊನ್ನೂರಸ್ವಾಮಿ, ಹೊನ್ನೂರಸ್ವಾಮಿ, ನಾಯ್ಡು, ಭೀಮಪ್ಪ ಆಡಿನ, ಪೆದ್ದಕ್ಕ ದೇವೇಂದ್ರ್ಪ, ಕರಿಯಪ್ಪ ಲೋಡಿನ್, ರಂಗಸ್ವಾಮಿ ಜಯರಾಂ, ಯಂಕಪ್ಪ ಹಡಪದ, ಝಾಕೀರ ಹುಸೇನ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಿ.ಜೆ.ಪಿ. ಸೇರ್ಪಡೆಯಾಗಿ ಕರಡಿ ಸಂಗಣ್ಣನವರನ್ನು ಗೆಲ್ಲಿಸುವಲ್ಲಿ ಶ್ರಮಿಸುವ ವಾಗ್ದಾನ ನೀಡಿದರು ಎಂದು ಪಕ್ಷದ ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.

ಸಂಗಣ್ಣ ಕರಡಿಯವರ ಸಾಧನೆಯ ಕೈಪಿಡಿ ಬಿಡುಗಡೆ


ಸಂಗಣ್ಣ ಕರಡಿಯವರ ಸಾಧನೆಯ ಕೈಪಿಡಿ ಬಿಡುಗಡೆ ಮಾಡಲಾಯಿತು. ಕರಡಿ ಸಂಗಣ್ಣನವರ ಸಾಧನೆಗಳ ಕುರಿತು ಮಾತನಾಡಿದರು. 
ಮೀಡಿಯಾಕ್ಲಬ್ ನಲ್ಲಿ  ಅಪ್ಪಣ್ಣ ಪದಕಿ,ಹಾಲೇಶ ಕಂದಾರಿ, ವಿ ಎಸ್.ಸಂಕ್ಲಾಪೂರ,ರಾಜು ಬಾಕಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು

Saturday, April 13, 2013

ರೈತನಿಂದ ನಾಯಕನವರೆಗೂ...


..ಸಂಗಣ್ಣ ಕರಡಿಯವರು ವಿವಿಧ ಯೋಜನೆಗಳಿಂದ ಕೊಪ್ಪಳ ವಿಧಾನ ಸಭಾ ಕ್ಷೇತ್ರವನ್ನು ಗಾಂಧೀಜಿಯವರ ಗ್ರಾಮ ಭಾರತದ ಕನಸನ್ನು ಒಳಗೊಂಡಂತೆ ತಮ್ಮ ದೀರ್ಘ ಕಾಲದ ಸಮಾಜಿಕ, ರಾಜಕೀಯ ಸೇವೆಗಳ ಅನುಭಗಳಿಂದ ಮತ್ತು ಸದಾ ಕ್ರೀಯಾಶೀಲ, ಅಧ್ಯಯನ, ಭೂತ, ವರ್ತಮಾನ, ಭವಿಷ್ಯ ಯೋಜನೆಗಳನ್ನು ಮೇಳೈಸಿಕೊಂಡು ಕೊಪ್ಪಳ ಕ್ಷೇತ್ರವನ್ನು
ಅಭಿವೃದ್ಧಿಗೊಳಿಸಿರುವುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮೂಲತಃ ಸ್ವಯಂ ಶ್ರಮಜೀವಿಗಳು, ಶಿಕ್ಷಣ ಪ್ರೇಮಿಗಳು, ಬಡವರ, ಧೀನ-ದಲಿತರ, ಅಲ್ಪಸಂಖ್ಯಾತರ ಕುರಿತಾಗಿ ಅಪಾರ ಕಾಳಜಿ ಹೊಂದಿರುವ ಮಾನ್ಯ ಶಾಸಕರು "ಶಾಸಕತ್ವದ ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯವೆಂದು" ೨೦೧೧ ರ ಕೊನೆಯಲ್ಲಿ ಶಾಸಕತ್ವದ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡವರು. ರೂ. ೧೨೦೦ ಕೋಟಿಗೂ ಹೆಚ್ಚು ಅನುದಾನವನ್ನು ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕೊಪ್ಪಳಕ್ಕೆ ಬಿಡುಗಡೆ ಮಾಡಿಸಿದರು. ಶಿಕ್ಷಣ, ವಸತಿ, ಕುಡಿಯುವ ನೀರು, ಕ್ಷೇತ್ರದ ಎಲ್ಲಾ ರಸ್ತೆಗಳು, ಕೊಪ್ಪಳ ನಗರವನ್ನು ಸರ್ವಾಂಗೀಣವಾಗಿ ಸುಸಜ್ಜಿತಗೊಳಿಸಿದ್ದು, ನೀರಾವರಿ ಯೋಜನೆಗಳು, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ, ಗುಡಿ-ಮಸೀದಿಗಳ ಪುನರುಜ್ಜೀವನಗೊಳಿಸಿರುವುದು, ಕೊಪ್ಪಳ ತಾಲೂಕಿನ ಸಮಗ್ರ ರಸ್ತೆಗಳನ್ನು ಆಧುನಿಕವಾಗಿ ನಿರ್ಮಿಸಿರುವುದು, ಪರಿಶಿಷ್ಟ ಪಂಗಡಗಳ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿರುವುದು, ವಿವಿಧ ಗ್ರಾಮಗಳಲ್ಲಿ ಕೆರೆ-ಬಾವಿಗಳನ್ನು ತೋಡಿಸಿರುವುದು, ರಂಗಮಂದಿರಗಳನ್ನು ನಿರ್ಮಿಸಿರುವುದು, ಯಾತ್ರಾ ಕ್ಷೇತ್ರಗಳಲ್ಲಿ ಯಾತ್ರಾ ನಿವಾಸಗಳನ್ನು ನಿರ್ಮಿಸಲು ಅನುದಾನ ಮಂಜೂರಾಗಿರುವುದು, ಮುಂತಾದ ಕಾಮಗಾರಿಗಳು ತೀವ್ರ ಪ್ರಗತಿಯಲ್ಲಿರುವುದು, ಅರಣ್ಯ ಇಲಾಖೆಯ ಬೃಹತ್ ಅನುದಾನದಲ್ಲಿ ಜಿಂಕೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ರಕ್ಷಣೆ ಮಾಡಲು ಯೋಜನೆ ಕೈಗೊಂಡಿರುವುದು, ಮೀನುಗಾರಿಕೆ ಪ್ರೋತ್ಸಾಹಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು, ಒಟ್ಟಾರೆ ಮಾನ್ಯ ಶಾಸಕರು ಅವಿಶ್ರಾಂತವಾಗಿ ಶ್ರಮಿಸಿ ತಮ್ಮ ವೈಯಕ್ತಿಕ ಪ್ರಭಾವ ಬೀರಿ ಸರ್ಕಾರದ ಎಲ್ಲಾ ಯೋಜನೆಗಳ ಅನುದಾನ ಪಡೆದು ಕೊಪ್ಪಳ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಶ್ರೀಮಂತಗೊಳಿಸಿದ್ದಾರೆ. ಇದಲ್ಲದೇ ಅನೇಕ ಯೋಜನೆಗಳು ಅಂದರೆ, ಗ್ರಾಮೀಣ ಭಾಗದಲ್ಲಿ, ಹಳ್ಳಿ-ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆಗಳು, ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನಗಳು, ಹಾಲು ಉತ್ಪಾದನೆಯ ಸಹಕಾರ ಸಂಘದ ಕಟ್ಟಡಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲಾ ಕೊಠಡಿಗಳು ಇಂತಹ ಹತ್ತು ಹಲವಾರು ಯೋಜನೆಗಳನ್ನು ಹಳ್ಳಿ-ಹಳ್ಳಿಗಳಿಗೆ ಮುಟ್ಟಿಸುವ ಅವರ ಶ್ರಮ ಅಪಾರ. 
                                     ಶ್ರೀಯುತ ಸಂಗಣ್ಣ ಕರಡಿಯವರ ವ್ಯಕ್ತಿತ್ವ ಅಪ್ಪಟ ಅಪರಂಜಿ, ಮಹಾಮಾನವತಾವಾದಿ,ಎಲ್ಲರನ್ನೂ ಪ್ರೀತಿಸುವ ಹಿರಿಮೆ ಉಳ್ಳವರು. ಜನಸೇವೆಯನ್ನೇ ಕಾಯಕ ಕೈಲಾಸವೆಂದುಕೊಂಡವರು. ಅಭಿವೃದ್ಧಿಯ ಕನಸುಗಾರ. ಕನಸಿನಂತೆ ಕ್ರಿಯೆ, ಕ್ರಿಯೆಗೆ ಪೂರಕ ಅಧ್ಯಯನ ಇವು ಸಂಗಣ್ಣನವರ ಯಶಸ್ಸಿನ ಅಂಶಗಳು. ಕ್ಷೇತ್ರದಲ್ಲಿ ೧೦ ಂ?ಂಜzಂ ಮಕ್ಕಳಿಂದ ೧೦೦ ಂ?ಂಜUಂಳ ಹಿರಿಯವರೆಗೆ ಎಲ್ಲರಿಗೂ "ಸಂಗಣ್ಣ ಕರಡಿ ಗೊತ್ತು" ವಿಧಾನಸಭೆಯಲ್ಲಿ ಕೊಪ್ಪಳವನ್ನು ಪ್ರತಿನಿಧಿಸುವ ಶಾಸಕರು ಸಂಗಣ್ಣ ಕರಡಿ ಒಬ್ಬರಾದರೆ, ಕೊಪ್ಪಳ ಕ್ಷೇತ್ರದಲ್ಲಿ ಅವರ ಸಹಸ್ರಾರು ಅಭಿಮಾನಿಗಳು "ಶಾಸಕರೆಂದರೆ ನಾವೇ, ಶಾಸಕರೆಂದರೆ ನಾವೇ" ಎಂದು ಹೆಮ್ಮೆ-ಅಭಿಮಾನಪಟ್ಟುಕೊಳ್ಳುವಷ್ಟು  ಜನ-ಮನ ಸಾಗರದಲ್ಲಿ
ಶಾಸಕರು ಬೆರೆತಿದ್ದಾರೆ. ಸಂಗಣ್ಣನವರ ಸರಳ ವ್ಯಕ್ತಿತ್ವದಿಂದಾಗಿ ಶಾಸಕತ್ವದ ಅಧಿಕಾರ ಸಾಮಾನ್ಯ ಜನತೆಯಲ್ಲಿ ಹಂಚಿ ಹೋಗಿದೆ. ಇ?ಇಔಲ್ಲಾ ಜನಾನುರಾಗಿಯಾಗಿ ಬೆಳೆದ ಸಂಗಣ್ಣನವರು ನಮ್ಮೆಲ್ಲರ ಅಣ್ಣನಾಗಿ ಈ ಕ್ಷೇತ್ರದ ಎಲ್ಲಾ ರೈತರ ಮನೆ ಮಗನಾಗಿ, ಸರ್ವ ಜನಾಂಗದ ಸಹೋದರನಾಗಿ, ಆಲದ ಮರದ ಹಾಗೆ ಬೆಳೆದು ಕ್ಷೇತ್ರ ಜನರಿಗೆಲ್ಲಾ ನೆರಳು ನೀಡಿದ, ಅಭಿವೃದ್ಧಿಯ ಪರ್ವವನ್ನು ಪ್ರಾರಂಭಿಸಿದ, ಯುದ್ಧೋಪಾದಿಯಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಿದ ಎಲ್ಲಾ ಗುಣಗಳ ಸಾಕಾರ ಮೂರ್ತಿ. ಸಾರ್ಥಕ ಸಾಧನೆಯ ಬದುಕನ್ನು ಕಟ್ಟಿಕೊಂಡ ಸರ್ವತೋಮುಖ ಅಭಿವೃದ್ಧಿಗೆ ಮೆಟ್ಟಿಲು ನಿರ್ಮಾಣ ಮಾಡಿದ ಸಮಗ್ರ ವಿಕಾಸ ಸಂಕಲ್ಪ ತೊಟ್ಟ ಇನ್ನೂ ಸಾಗುತ್ತಿರಲಿ ಇವರ ಸಾಧನೆಯ ಪಯಣ...ಸಮಸ್ತ ಕ್ಷೇತ್ರದ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು...
ಇವರ ಸಾಧನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಕೊಪ್ಪಳ ಕ್ಷೇತ್ರದ ಹಾಗೂ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಹಿರಿಯ, ಕಿರಿಯ, ಮಹಿಳಾ ಪದಾಧಿಕಾರಿಗಳಿಗೆ, ಯುವ ಮಿತ್ರರಿಗೆ ಹಾಗೂ ಕಾರ್ಯಕರ್ತರಿಗೆ ಹಾಗೂ ಸಮಸ್ತ ಕ್ಷೇತ್ರದ ನಾಗರೀಕ ಬಂಧುಗಳಿಗೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಮಾಧ್ಯಮ ಬಂಧುಗಳಿಗೆ, ಬುದ್ಧಿ ಜೀವಿಗಳಿಗೆ, ಪ್ರಗತಿಪರ ಚಿಂತಕರಿಗೂ, ಸಾಹಿತಿಗಳಿಗೂ ನಮ್ಮ ಅಭಿಮಾನಿ ಬಳಗದವರಿಂದ ಅಭಿನಂದನೆಗಳು.... ..


"ಬಯಿದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆ-ತಾಯಿಗಳೆಂಬೆ,
ಆಳಿಗೊಂಡವರೆನ್ನ ಆಳ್ದವರೆಂಬೆ, ಜರಿದವರೆನ್ನು ಜನ್ಮ ಬಂಧುಗಳೆಂಬೆ
ಹೊಗಳಿದವರೆನ್ನು ಹೊನ್ನಶೂಲದಲಿಕ್ಕಿದರೆಂಬೆ, ಕೂಡಲ ಸಂಗಮದೇವ..."
ಎಂಬ ತತ್ವವನ್ನು ಮೈಗೂಡಿಸಿಕೊಂಡ ಸಂಗಣ್ಣ ಕರಡಿಯವರ ಜನಾನುರಾಗ ವ್ಯಕ್ತಿತ್ವ
ಕ್ಷೇತ್ರದ ಜನತೆಗೆ ಅಚ್ಚು-ಮೆಚ್ಚು...

ತರಕಾರಿ ಮಾರುಕಟ್ಟೆ ಸೌಲಭ್ಯ


ಕೊಪ್ಪಳ ಜಿಲ್ಲೆಯಾಗಿ ೧೬  ವರ್ಷ ಕಳೆದರೂ ಒಂದು ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ಸೌಲಭ್ಯವಿಲ್ಲದಿರುವ ಕೊರಗು ತರಕಾರಿ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೂ ಕಾಡುತ್ತಿತ್ತು. ಇದನ್ನು ಮನಗಂಡ ಸಂಗಣ್ಣ ಕರಡಿಯವರು ತರಕಾರಿ ಮಾರಾಟಗಾರರಿಗೆ ಅನೂಕೂಲ ಮಾಡಿಕೊಡುವ ದೃಷ್ಟಿಯಿಂದ ಒಳ್ಳೆಯ ತರಕಾರಿ ಮಾರುಕಟ್ಟೆ ಮಂಜೂರು ಮಾಡಿಸಿಕೊಟ್ಟರುವುದು ಇಡೀ ಕೊಪ್ಪಳ ನಗರದ ತರಕಾರಿ ಮರಾಟಗಾರರಿಗೆ ಹಾಗೂ ಎಲ್ಲಾ ಗ್ರಾಮೀಣ ಭಾಗದ ಗ್ರಾಹಕರಿಗೂ ಸಂತಸ ತಂದಿದೆ. ಇದಕ್ಕಿಂತ ಪೂರ್ವ, ತರಕಾರಿ ಮರಾಟಗಾರರು ನೆಲದ ಮೇಲೆ ಕುಳಿತು ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಮಳೆ, ಗಾಳಿ, ಬಿಸಿಲುಗಳಿಂದ ಯಾವುದೇ ರಕ್ಷಣೆಯಿರಲಿಲ್ಲ. ಮಳೆಯಾದರೆ ಸಾಕು ಇಡೀ ಮಾರುಕಟ್ಟೆ ತುಂಬಾ ನೀರು ಸಂಗ್ರಹವಾಗುತ್ತಿತ್ತು. ಅದರಿಂದ ಅನೇಕ ರೋಗಗಳು ಬರುವ ಸಂಭವವೇ ಹೆಚ್ಚಿತ್ತು. ಅದರ ಜೊತೆಗೆ ಇಕ್ಕಟ್ಟಾದ ಜಾಗೆ
ಮತ್ತು ಅವೈಜ್ಞಾನಿಕವಾದ ರಸ್ತೆಯಿಂದಾಗಿ ತರಕಾರಿ ಮಾರಾಟಗಾರರಿಗೆ ಬಹಳಷ್ಟು ತೊಂದರೆಗಳಾಗುತ್ತಿದ್ದವು. ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಂಗಣ್ಣ ಕರಡಿಯವರು ಸರಕಾರದಿಂದ ೫ ಕೋಟಿ ರೂ. ಗಳನ್ನು ಮಾರುಕಟ್ಟೆಯ ಆಧುನೀಕರಣಕ್ಕೆ ಹಾಗೂ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಸೌಲಭ್ಯ ನೀಡುವ ದೃಷ್ಟಿಯಿಂದ ಸರಕಾರದ ಅನುದಾನ ಕೊಡಿಸಿರುವುದು ಇಡೀ ತರಕಾರಿ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಸಂತಸ ತಂದಿದೆ.

ಕೊಪ್ಪಳ ನಗರಕ್ಕೊಂದು ಐತಿಹಾಸಿಕ ಕಾರ್ಮಿಕ ಆಸ್ಪತ್ರೆ


ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಕೈಗಾರಿಕೆಗಳನ್ನು ಹೊಂದಿದ ನಗರ ಸುಮಾರು  ೩೫ ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತಿದ್ದು, ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಕೊಟ್ಟಿರುವುದು ಕೊಪ್ಪಳ ಕ್ಷೇತ್ರದ ಜನರ ಪುಣ್ಯವೇ ಸರಿ ಎನ್ನಬಹುದು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಕುಟುಂಬದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಈ ಕೈಗಾರಿಕೆಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಇಂತಹ ಕೈಗಾರಿಕೆಗಳಲ್ಲಿ ಕೆಲಸಮಾಡುವ ಕಾರ್ಮಿಕ ಬಂಧುಗಳಿಗೆ ಒಂದಿ?ಂಂಔ ಸರಕಾರದ ನೆರವು ಸಿಗಲೆಂದು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ಆರೋಗ್ಯ ಭದ್ರತೆಯನ್ನು ನೀಡಬೇಕೆಂಬ ಮಹಾದಾಶೆಯಿಂದ ಸಂಗಣ್ಣ ಕರಡಿಯವರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯನ್ನು ಕೊಪ್ಪಳ ನಗರಕ್ಕೆ ಮಂಜೂರು ಮಾಡಿಸಿರುವುದು ನಿಜಕ್ಕೂ ಕಾರ್ಮಿಕರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಅದಲ್ಲದೇ ಈ ಆಸ್ಪತ್ರೆಯಿಂದ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕನಿಗಲ್ಲದೇ ಅವರ ಮನೆಯ ಸದಸ್ಯರಿಗೂ ಅಪಘಾತ ವಿಮೆ ಜಾರಿಗೊಳಿಸುವ ಸೌಲಭ್ಯ ಮತ್ತು ಇನ್ನಿತರ ಯಾವುದೇ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ಕೊಡುವ ಒಂದು ಸೌಲಭ್ಯ ಈ ಆಸ್ಪತ್ರೆಯಲ್ಲಿ ಒಳಗೊಂಡಿರುವುದರಿಂದ ಇದು ಸಂಗಣ್ಣನವರು ಕಾರ್ಮಿಕ ಸಮುದಾಯಕ್ಕೆ ನೀಡಿರುವ ಒಂದು ದೊಡ್ಡ ಕೊಡುಗೆಯೆಂದೇ ಹೇಳಬಹುದು. ಇದರಿಂದ ಬಡ ಕಾರ್ಮಿಕ ಬಂಧುಗಳು ಆರೋಗ್ಯ ಭದ್ರತೆಯನ್ನು ಕಾಪಾಡಿಕೊಂಡು
ಕೈಗಾರಿಕೆಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವನ್ನು ನಿರ್ಮಾಣ ಮಾಡಿರುವುದು ನಿಜಕ್ಕೂ ಕೂಡಾ ಅಭಿನಂದನಾರ್ಹ. ಸಂಗಣ್ಣ ಕರಡಿಯವರು ಮಾಡಿದ ಈ ಸಾಮಾಜಿಕ ಪ್ರಜ್ಞೆ  ಇಡೀ ಕಾರ್ಮಿಕ ಕುಟುಂಬವನ್ನು ರಕ್ಷಣೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಕೊಪ್ಪಳ ನಗರ ಕಲೆ ಮತ್ತು ಸಂಸ್ಕೃತಿಯತ್ತ ದಿಟ್ಟ ಹೆಜ್ಜೆ


ಯಾವುದೇ ಒಂದು ನಾಡು ಬೆಳೆಯಬೇಕಾದರೆ, ನೀರಾವರಿ, ಆರೋಗ್ಯ, ಶಿಕ್ಷಣ ಹೇಗೆ ಮುಖ್ಯವೋ ಪ್ರತಿಯೊಬ್ಬ  ಮನುಷ್ಯನ  ಬದುಕಿಗೆ ಕಲೆ ಮತ್ತು ಸಂಸ್ಕೃತಿ ಅಷ್ಟೇ  ಮುಖ್ಯವೆಂಬ ವಿಚಾರವನ್ನು ಮನಗಂಡ ಸಂಗಣ್ಣನವರು ಕೊಪ್ಪಳ ನಗರಕ್ಕೆ
ಜಿಲ್ಲಾ ರಂಗ ಮಂದಿರ ಮಂಜೂರು ಮಾಡಿಸುವುದರ ಮೂಲಕ ಸುಮಾರು ೩ ಕೋಟಿ ಅನುದಾನವನ್ನು ಸರಕಾರದಿಂದ ಕೊಡಿಸುವುದರ ಜೋತೆಗೆ ಕಲೆ ಮತ್ತು ಸಾಹಿತ್ಯವನ್ನು ಕೊಪ್ಪಳ ನಗರದಲ್ಲಿ ನಿರಂತರವಾಗಿ ಪೋಷಿಸಿಕೊಂಡು ಬರಲು ಬಹಳಷ್ಟು  ಸಹಕರಿಸಿದ್ದಾರೆ. ಅದಲ್ಲದೇ ಜೀವನಕ್ಕೆ ಕೇವಲ ಹಣ ಮುಖ್ಯವಲ್ಲ, ಬದುಕಿಗೆ ನೆಮ್ಮದಿ ಸಿಗಬೇಕಾದರೆ ಕಷ್ಟಗಳನ್ನು  ಮರೆಯಬೇಕಾದರೆ ಮನರಂಜನಾತ್ಮಕ ಹಾಗೂ ಈ ನಾಡಿನ ಕಲೆ ಮತ್ತು ಸಾಹಿತ್ಯವನ್ನು ಪ್ರತಿಬಿಂಬಿಸುವ ರಂಗ ಮಂದಿರಗಳ ಕೊಡುಗೆ ಅಪಾರವಾದದ್ದು, ಈ ಜಿಲ್ಲಾ ರಂಗ ಮಂದಿರ ಸ್ಥಾಪನೆಗೆ ಕೊಪ್ಪಳದ ಎಲ್ಲಾ ಸಾಹಿತಿ ಪ್ರೇಮಿಗಳು, ಕಲಾವಿದರು, ರಂಗ ಭೂಮಿಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ರಂಗಭೂಮಿ ಕಲಾವಿದರಿಗೆ ಎಲ್ಲಿಲ್ಲದ ಸಂತಸ ತಂದು ಕೊಟ್ಟಿರುವುದು ಇಡೀ ಕ್ಷೇತ್ರದಲ್ಲಿ ಕಂಡು ಬರುತ್ತದೆ. ಹಾಗೇ ಕರ್ನಾಟಕ ರಾಜ್ಯದ ಪರಂಪರೆಯನ್ನು, ಹಲವಾರು ಸಾಮಾಜಿಕ, ಆಧ್ಯಾತ್ಮಿಕ ನಾಟಕಗಳನ್ನು ಪ್ರದರ್ಶಿಸುವ ಹಾಗೂ ಕಲೆ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಬಲ ನೀಡಬಲ್ಲ
ಈ ಸುಂದರವಾದ ಸಾಂಸ್ಕೃತಿಕ ಭವನ ಕೊಪ್ಪಳ ನಗರಕ್ಕೆ ಮೆರಗು ನೀಡುತ್ತಿದೆ, ಹಾಗೇ ಪೂರ್ವಜರ ಕನಸುಗಳು ಇತಿಹಾಸವನ್ನು ನೆನಪು ಮಾಡುವ ಹಿಂದಿನ ರೈತಾಪಿ ಜನರ ಬದುಕನ್ನು ನೆನಪಿಸಿಕೊಳ್ಳುವ, ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ನಡೆಸಲು ಅತ್ಯಂತ ಪ್ರಯೋಜನಕಾರಿಯಾದ  ಸಾಂಸ್ಕೃತಿಕ ಭವನ ನಮ್ಮೆಲ್ಲರಿಗೂ ಆನಂದವನ್ನುಂಟು ಮಾಡಿದೆ. ಇದನ್ನು ಮಂಜೂರು ಮಾಡಿಸಲು ಶ್ರಮಿಸಿದ ಸಂಗಣ್ಣ ಕರಡಿಯವರ ಕಲೆ ಮತ್ತು ಸಾಹಿತ್ಯ ಪ್ರೇಮ ನಿಜಕ್ಕೂ ಕೂಡಾ ಮೆಚ್ಚುವಂತದ್ದು. ಈ ರಂಗ ಮಂದಿರ ಕೊಪ್ಪಳ ನಗರದ ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ದಾರಿ ದೀಪವಾಗಲಿ ಎಂದು ಅವರ ಅಭಿಮಾನಿ ಬಳಗ ಹಾರೈಸುತ್ತz

ಏಳು ಗ್ರಾಮಗಳ ಸ್ಥಳಾಂತರ


೨೦೧೦-೧೧ ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿ ಅತಿವೃಷ್ಟಿ ಉಂಟಾಗಿ ಹಲವು ಗ್ರಾಮಗಳು ನೀರಿನಲ್ಲಿ
ಕೊಚ್ಚಿಹೋದವು. ಕ್ಷೇತ್ರದ ಜನರು ಭಯಭೀತರಾಗಿ ಸೂರು ಕಳೆದುಕೊಂಡು ನೆಲೆಯಿಲ್ಲದೇ ತುತ್ತು ಅನ್ನಕ್ಕೂ ಪರಿತಪಿಸುವತಂಹ ವಾತಾವರಣ ನಿರ್ಮಾಣವಾಗಿತ್ತು, ಚಿಕ್ಕಸಿಂದೋಗಿ, ಗುನ್ನಳ್ಳಿ, ಹಿರೇಸಿಂದೋಗಿ, ಕೋಳೂರು, ಕಾಟ್ರಳ್ಳಿ, ನೆರೆಗಲ್ ಹಾಗೂ ಮಾದಿನೂರ ಗ್ರಾಮಸ್ಥರು ನಿಂತ ನೆಲವೇ ಭಾರವಾಗಿ ಆ ಸಂದರ್ಭದಲ್ಲಿ ನೀರೆಲ್ಲಾ ತುಂಬಿ ಹೋಗಿದ್ದ ಗ್ರಾಮಕ್ಕೆ ಶಾಸಕ ಸಂಗಣ್ಣ ಕರಡಿಯವರು ಭೇಟಿ ನೀಡಿದರು, ಅವರು ಮನಸ್ಸು ಕೂಡಾ ಕರಗಿಹೋಯಿತು. ಮಮ್ಮಲ ಮರಗಿದರು. ಮಮ್ಮಲ ಮರಗಿದ ಸಂಗಣ್ಣನವರು ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗ್ರಾಮಗಳನ್ನೇ  ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಹಲವಾರು ಕುಟುಂಬಗಳು ನೀರುಪಾಲಾಗಿದ್ದರಿಂದ ಆ ಎಲ್ಲಾ ಹಳ್ಳಿಗಳನ್ನು ತೀವ್ರ ಗತಿಯಿಂದ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ಆದೇಶ ಮಾಡಿ ಸಂಗಣ್ಣನವರ ಜನಪರ ಕಾಳಜಿಯನ್ನು ಮೆಚ್ಚಿ ತುಂಬಿದ ಸಭೆಯಲ್ಲಿ ಅವರ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದು, ಮತ್ತು ಸೂರು ಕಳೆದುಕೊಂಡ ಗ್ರಾಮಸ್ಥರು ಸಂಗಣ್ಣನವರನ್ನು ನೆಚ್ಚಿದ್ದು ಇತಿಹಾಸ ಕಂಡ ಸತ್ಯವೇ ಆಗಿದೆ.

ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಕ್ರಾಂತಿ ಮಾಡಿದ ಕಾರ್ಮಿಕ ಬಂಧು


ಈಗಾಗಲೇ ಕೊಪ್ಪಳ ಜಿಲ್ಲೆ ಕೈಗಾರಿಕಾ ನಗರವೆಂದು ಕರ್ನಾಟಕ ರಾಜ್ಯದಲ್ಲೇ ಪ್ರಸಿದ್ಧಿಯಾಗಿದ್ದು, ದೊಡ್ಡ ಕೈಗಾರಿಕೆಗಳು ಪ್ರಾರಂಭವಾಗಿವೆ. ಅದಲ್ಲದೇ ಆರ್ಥಿಕವಾಗಿ ಹಿಂದುಳಿದಿರುವಂತಹ ಕಾರ್ಮಿಕ ಬಂಧುಗಳಿಗೆ ಸ್ವತಂತ್ರವಾಗಿ ಸಣ್ಣ-ಸಣ್ಣ ಕೈಗಾರಿಕೆಗಳನ್ನು ನಡೆಸುವ ದೃಷ್ಟಿಯಿಂದ ಸಂಗಣ್ಣನವರು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ (ಕೆ.ಎಸ್.ಎಸ್.ಐ.ಡಿ.ಸಿ) ಅಧ್ಯಕ್ಷರಾದ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕ ಬಂಧುಗಳ ಹಿತ ದೃಷ್ಟಿಯಿಂದ ವಸಾಹತು ಸ್ಥಾಪನೆಗೆ ಬಸಾಪುರದ ಹತ್ತಿರ ೧೦೪ ಎಕರೆ ಜಮೀನು ಖರೀದಿ ಮಾಡಿದ್ದು, ಸಧ್ಯದಲ್ಲಿಯೇ ಗುಡಿ ಕೈಗಾರಿಕೆಗಳಿಗೆ ನಿವೇಶನಗಳನ್ನು ಹಾಗೂ ಮಳಿಗೆಗಳನ್ನು ನಿರ್ಮಾಣ ಮಾಡಿ ವಸಾಹತು ಕೈಗಾರಿಕೆಗಳ ಸ್ಥಾಪನೆಗೆ ಒಂದು ದಿಟ್ಟ  ಹೆಜ್ಜೆಯನ್ನು ಇಟ್ಟಿರುವುದು ಕಾರ್ಮಿಕ ಬಂಧುಗಳಿಗೆ ನೆಲೆಗಟ್ಟನ್ನು ಕೊಟ್ಟು ಅನೇಕ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದ ಸಂಗಣ್ಣ ಕರಡಿಯವರ ಶ್ರಮ ಅಪಾರವಾದದ್ದು. ಇನ್ನು ಮುಂದೆ ಕೊಪ್ಪಳದಲ್ಲಿ ಸಣ್ಣ ಕೈಗಾರಿಕೆಗಳ ಕ್ರಾಂತಿ ಹಾಗೂ ಕಾರ್ಮಿಕ ಬಂಧುಗಳ ಆರ್ಥಿಕ ಸುಧಾರಣೆಯಿಂದ ಅವರವರ ಬದುಕನ್ನು ಕಟ್ಟಿಕೊಳ್ಳುವ ಕಾಯಕಕ್ಕೆ ಸದಾ ಟೊಂಕ ಕಟ್ಟಿ ನಿಂತಿರುವ ಮಹಾ ನಾಯಕ ಸಂಗಣ್ಣ ಕರಡಿಯವರ ಸಾಧನೆಯನ್ನು ಎಳೆ-ಎಳೆಯಾಗಿ ಹೇಳುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿದ್ದೇವೆ. ಅಲ್ಲದೇ ಈ ಯೋಜನೆಯ ಮಂಜೂರಾತಿಗಾಗಿ ಸಹಕರಿಸಿದ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ರಾಜುಗೌಡ ರವರನ್ನು ಕೂಡಾ ಸಂಗಣ್ಣ ಕರಡಿಯವರು ತುಂಬು ಹೃದಯದಿಂದ ಸ್ಮರಸಿಕೊಳ್ಳುತ್ತಾರೆ. ಕೊಪ್ಪಳದಲ್ಲಿರುವ ಅಸಂಖ್ಯಾತ ಕಾರ್ಮಿಕ ಬಂಧುಗಳು ತಮ್ಮ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನವನ್ನು ಸ್ವತಂತ್ರವಾಗಿ ನಡೆಯಿಸಿಕೊಂಡು ಹೋಗಲು ನೆರವು ನೀಡಿದ ನೆಚ್ಚಿನ ನಾಯಕನನ್ನು ತುಂಬು ಹೃದಯದಿಂದ ನೆನೆಯುತ್ತಾರೆ. ಕಾರಣ ಅಲ್ಲೊಂದು ಇಲ್ಲೊಂದು ವರ್ಕಶಾಪಗಳು ಇರುವುದಕ್ಕಿಂತ ಒಂದೇ ಹತ್ತಿರ ಎಲ್ಲಾ ಗುಡಿ ಕೈಗಾರಿಕೆಗಳು ಇರುವುದರಿಂದ ಸಾರ್ವಜನಿಕರಿಗೂ ಕೂಡಾ ಸಮಯದ ವ್ಯಯ ತಪ್ಪುವುದರ ಜೊತೆಗೆ ಅನೂಕೂಲವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಸ್ವತಂತ್ರ ಜೀವನ ಮಾಡುವುದು ಸುಗಮವಾಗುವುದು.

ಕ್ರೀಡಾಪಟುಗಳಿಗೊಂದು ಸಂತಸದ ಸುದ್ಧಿ



ಕೊಪ್ಪಳ ನಗರದ ಬಹುದಿನಗಳ ಬೇಡಿಕೆಯಾಗಿದ್ದ ಒಂದು ಸುಸಜ್ಜಿತ ಕ್ರೀಡಾಂಗಣದ ಕನಸು ನನಸಾಗಿರುವದು, ಕೊಪ್ಪಳ ನಗರದ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಯುವಕರು ಸಧೃಡ ಶಾರೀರಿಕ ಗುಣ ಮಟ್ಟವನ್ನು ಕಾಯ್ದುಕೊಳ್ಳುವ ಒಂದು ಸೌಲಭ್ಯವನ್ನು ಸಂಗಣ್ಣನವರು ಕೊಪ್ಪಳ ನಗರಕ್ಕೆ ಕೊಡುವುದರ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ, ಕ್ರೀಡಾಪಟುಗಳ ಪ್ರೀತಿಗೆ ಪಾತ್ರರಾಗಿದ್ದಾರೆಂದರೂ ತಪ್ಪಾಗಲಿಕ್ಕಿಲ್ಲ. ಒಂದು ಸುಸಜ್ಜಿತವಾದಂತಹ ವಿಶಾಲವಾದ ಕ್ರೀಡಾಂಗಣ ರೂಪಿಸುವುದರ ಜೊತೆಗೆ ಕಟ್ಟಡ ನಿರ್ಮಾಣ, ಪ್ರೇಕ್ಷರ ಗ್ಯಾಲರಿ, ಈಜುಗೊಳ, ದೈಹಿಕ ಶಾಲೆ, ಬ್ಯಾಡ್ಮಿಟನ್, ಜಿಮ್ ಸೌಲಭ್ಯಗಳು ಮೊದಲ ಬಾರಿಗೆ ಜಿಲ್ಲೆಯ ಜನತೆಗೆ ಸಿಕ್ಕಿರುವುದು ಮಹಾದಾನಂದವನ್ನುಂಟು ಮಾಡಿದೆ. ಈ ರೀತಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿದ ಎಲ್ಲಾ ವರ್ಗದ ನೆಚ್ಚಿನ ನಾಯಕ ಸಂಗಣ್ಣ ಕರಡಿಯವರ ಈ ಅಭಿವೃದ್ಧಿಯನ್ನು ನೋಡಿದವರು ಸಂತಸ ಪಡಲಾರದೇ ಇರಲಾರರು. ಹೀಗೆ ಮಾಡಿದ ಅಭಿವೃದ್ಧಿ ಜಿಲ್ಲೆಯ ಜನತೆ ಸಮರ್ಪಣವಾದಾಗಿನಿಂದ ಜಿಲ್ಲೆಯ ಎಲ್ಲಾ ಜನತೆ ಖುಷಿಯಿಂದ ಇರುವುದಂತೂ ಕಂಡು ಬರುತ್ತದೆ. ಸಂಗಣ್ಣನವರ ಬಗ್ಗೆ ಅಭಿಮಾನದ ಮಾತುಗಳು ಎಲ್ಲೆಲ್ಲೂ ಮೊಳಗುತ್ತಿವೆ. ಈ ಅಭಿವೃದ್ಧಿಯೇ ಅವರಿಗೆ ದೊಡ್ಡ ಶಕ್ತಿಯಾಗಿ ನಿಲ್ಲಬಲ್ಲದೆಂಬ ವಿಶ್ವಾಸ ಅವರ ಅಭಿಮಾನಿಗಳದ್ದು.
"ಕಣ್ಣು ಮುಂದೆ ಗುರಿ ಇರಲು ಬೆನ್ನ ಹಿಂದೆ ಗುರು ಇರಲು, ಮೇರು ಪರ್ವತ ಇರಲಿ ಏರಲು ಯಶಸ್ಸು ನಿನ್ನದೇ ಎನ್ನುವ ವಿವೇಕಾನಂದರ ಮಾತು ಇಲ್ಲಿ ಪ್ರಸ್ತುತ ಎನಿಸುತ್ತದೆ." ಅದಲ್ಲದೇ ಸಂಗಣ್ಣನವರ ಅವಿರತ ಪರಿಶ್ರಮ, ಜನಪರ ಕಾಳಜಿ, ಯುವಕರಲ್ಲಿ ಕಿಚ್ಚನ್ನು ಹುಟ್ಟಿಸದೇ ಇರಲಾರದು, ಅವರು ಹುಟ್ಟು ಹಾಕಿದ ಅಭಿವೃದ್ಧಿ ಈ ಕ್ಷೇತ್ರದ ಯುವಕರಿಗೆ ಮಾದರಿ. ಶಾಲಾ ವಿದ್ಯಾರ್ಥಿಗಳೆಂದರೆ ಸಂಗಣ್ಣನವರಿಗೆ ಎಲ್ಲಿಲ್ಲದ ಪ್ರೀತಿ, ಬಸ್ ಪಾಸ್ ಇರಲಿ, ಫೀ ಕಟ್ಟುವದಿರಲೀ, ಪ್ರಯಾಣದ ಸಮಸ್ಯೆ ಇರಲೀ ತತಕ್ಷಣ ಸ್ಪಂದಿಸಿ, ವಿದ್ಯಾರ್ಥಿಗಳ ನೆರವಿಗೆ ಧಾವಿಸುವ ಅವರ ಗುಣ ನಿಜಕ್ಕೂ ಅವಿಸ್ಮರಣೀಯ.

ಕೊಪ್ಪಳ ನಗರಕ್ಕೆ ಸಂಚಾರ ಪೊಲೀಸ್ ಠಾಣೆ


ಕರ್ನಾಟಕ ರಾಜ್ಯದಲ್ಲಿಯೇ ಬೆಂಗಳೂರನ್ನು ಹೊರತು ಪಡಿಸಿದರೆ ಕೊಪ್ಪಳ ಕೈಗಾರಿಕಾ ನಗರವೆಂದೇ ಖ್ಯಾತಿ ಪಡೆದಿದೆ. ಸುಮಾರು ಲಕ್ಷಾಂತರ ಕಾರ್ಮಿಕರು ಆ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಇವರು ಕೊಪ್ಪಳ ನಗರಕ್ಕೆ ಬಂದು ಹೋಗಲು ಅನೇಕ ಬಸ್ ವಾಹನಗಳ ಸೌಕರ್ಯವಿದೆ. ಹಾಗೂ ಹೊಸಪೇಟೆ ಮತ್ತು ಗದಗಿಗೆ ಹಾದು ಹೋಗುವ ಎನ್.ಹೆಚ್-೬೩ ರಸ್ತೆಯು ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ವಿಪರೀತ ವಾಹನ ದಟ್ಟಣೆ ಮತ್ತು ಅಷ್ಟು  ಪ್ರಮಾಣದ ಜನಜಂಗುಳಿಯಿಂದ ಇಲ್ಲಿಯವರೆಗೆ ನಮಗೆ ಬಹಳಷ್ಟು ಸಮಸ್ಯೆ ಕಾಡುತ್ತಿತ್ತು. ಅನೇಕ ದುರಂತಗಳು, ಮಾರಕ ಅಪಘಾತಗಳಿಂದ ಅನೇಕ ಸಾವು-ನೋವುಗಳು ಆಗಿರುವುದು ನಮ್ಮ ಕಣ್ಣ ಮುಂದೆ ಇದೆ. ಹಾಗೂ ರಸ್ತೆಗಳಲ್ಲಿ ಹೋಗುವ ಸಾರ್ವಜನಿಕರಿಗೂ ಕೂಡಾ ಬಹಳಷ್ಟು  ತೊಂದರೆಯ ವಾತವಾರಣ ಇದ್ದುದ್ದನ್ನು ಗಮನಿಸಿದ ಸಂಗಣ್ಣ ಕರಡಿಯವರು ಸಾರ್ವಜನಿಕರ ತೊಂದರೆ ನೀಗಿಸಲು ಅಪಘಾತ ತಡೆಗಟ್ಟಲು ಸುಸಜ್ಜಿತ ರಸ್ತೆಯ ಜೊತೆಗೆ ಕೊಪ್ಪಳದ ಬಹು ದಿನಗಳ ಕನಸಾದ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದು, ಸಾರ್ವಜನಿಕರಿಗೆ ಸಂತಸ ತಂದಿದೆ. ಇದರಿಂದ ಮುಕ್ತವಾಗಿ ಸಾರ್ವಜನಿಕರು ಸಂಚರಿಸಲು, ವಾಹನ ಸವಾರರು ಸಂಚಾರ ಪೊಲೀಸ್ ಠಾಣೆಗಳ ನಿಯಮಾವಳಿಗಳನ್ನು ಪಾಲಿಸುತ್ತಾ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿರುವ ಸಂಗಣ್ಣ ಕರಡಿಯವರನ್ನು ಎಂದಿಗೂ ಮರೆಯಲಾಗದು

ಕೋಟೆಕೊತ್ತಲಗಳು ಹಾಗೂ ಕೆರೆಗಳ ಅಭಿವೃದ್ಧಿ ಮಾಡಿದ ನಾಯಕ



ಕೊಪ್ಪಳ ನಗರದ ಜನತೆಗೆ ಬಹುದಿನಗಳ ಬೇಡಿಕೆಯಾಗಿದ್ದ ಹುಲಿಕೆರೆ ಯೋಜನೆಯನ್ನು ಕೈಗೆತ್ತಿಕೊಂಡ ಸಂಗಣ್ಣನವರು
ಸಾರ್ವಜನಿಕರಿಗೆ ಶುದ್ಧವಾದ ಗಾಳಿ ಮತ್ತು ಆರೋಗ್ಯಕ್ಕೆ ಒತ್ತುಕೊಟ್ಟು ಹಾಗೂ ನಗರದ ಸೌಂದರ್ಯೀ-ಕರಣವನ್ನು ಹೆಚ್ಚಿಸಲು ದೋಣಿ ವಿಹಾರ ಸೌಲಭ್ಯವನ್ನು ಕಲ್ಪಸಿಕೊಟ್ಟು ನಗರದ ಜನತೆಗೆ ಮಹಾದುಪಕಾರ ಮಾಡಿದ್ದಾರೆ. ಅನೇಕಂ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಸರಕಾರದ ಅನುದಾನ ಕೊಡಿಸುವ ಮೂಲಕ ಕೊಪ್ಪಳ ನಗರಕ್ಕೆ ಅತ್ಯವಶ್ಯಕ ಜನರ ಆಶೋತ್ತರಗಳಿಗೆ ಸ್ಪಂದಿಸಲು ಸಹಕರಿಸಿದ ಸಾರ್ವಜನಿಕರನ್ನು, ಬುದ್ಧಿಜೀವಗಳನ್ನು ಹಾಗೂ ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ಇಂದಿಗೂ ಕೂಡಾ ತುಂಬು ಹೃದಯದಿಂದ ಸ್ಮರಿಸುತ್ತಾರೆ. ಹುಲಿಕೆರೆ ಕೊಪ್ಪಳ ಜಿಲ್ಲೆಗೆ ಒಂದು ಐತಿಹಾಸಿಕ ತಾಣವಾಗಿ ಮಾರ್ಪಟ್ಟಿರುವುದು ಕೊಪ್ಪಳ ನಗರಕ್ಕೆ ಒಂದು ಹೊಸ ಆಯಾಮ ಕಲ್ಪಿಸಿಕೊಟ್ಟಿರುವುದು ನಗರದ ಜನತೆಗೆ ಸಂತಸ ಕೊಟ್ಟಿದೆ. ಸಂಜೆಯ ಸಮಯದಲ್ಲಿ ವಿಶ್ರಾಂತಿಗೆಂದು ಹೋದ ಜನರ ದೋಣಿ ವಿಹಾರ ಮಾಡುವ ಮೂಲಕ ಅಲ್ಲಿರುವ ಸುಂದರ ಪ್ರಕೃತಿಯನ್ನು ಕಂಡು ಆಶ್ಚರ್ಯಚಕಿತರಾಗಿ ತಮ್ಮ ದುಖ: ದುಮ್ಮಾನಗಳನ್ನು ದೂರಸರಿಸಿ ಸಂಗಣ್ಣನವರನ್ನು ಸ್ಮರಿಸದೇ ಇರಲಾರರು. ಹಾಗೂ ಇದರ ಜೊತೆಗೆ ಪೂರ್ವಜರು ಕಟ್ಟಿಕೊಂಡ ಕೋಟೆ ಕೊತ್ತಲಗಳನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ
ಸರಕಾರದಿಂದ ೩ ಕೋಟಿ ಅನುದಾನವನ್ನು ತಂದು ಕೊಡುವಲ್ಲಿ ಕೊಪ್ಪಳ ಕ್ಷೇತ್ರದ ಜನತೆಗೆ ಎಲ್ಲಿಲ್ಲದ ಆನಂದವನ್ನುಂಟು ಮಾಡಿದೆ. ಐತಿಹಾಸಿಕ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಗುರುತಾಗಿರುವ ಕೋಟೆಗಳು ಕೊಪ್ಪಳ ನಗರದ ಸೌಂದರ್ಯವನ್ನು ಹೆಚ್ಚಿಸಿದೆ.